ಕೊಪ್ಪಳ
ಮಂಗಳವಾರ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರು ವಿದ್ಯಾರ್ಥಿಗಳ ಮೇಲೆ ದರ್ಪ ತೋರಿಸಿದ್ದಾರೆ. ಚಿಲ್ಕರಾಗಿ ಅಂತ ಇವರ ಹೆಸರು..ಶಿಸ್ತು..ಹಾಗು ಬುದ್ದಿ ಹೇಳಬೇಕಾದ ಇವರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಹಾಗು ದಬ್ಬಾಳಿಕೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವುದನ್ನು ತಿಳಿದುಕೊಂಡ ಮಾಧ್ಯಮದವರಿಗೆ ವರದಿ ಮಾಡಲು ಹೋದಾಗ ಮಾಧ್ಯಮದವರ ಮೇಲೂ ಪ್ರಾಂಶುಪಾಲ ಮಹಾಶಯರು ತಮ್ಮ ನಿಯಂತ್ರ ಕಳೆದುಕೊಂಡು ಗೂಂಡಾಗಳಿಗೆ ಹೋಲಿಸಿ ಅಸಭ್ಯ ವರ್ತನೆ ಮಾಡಿದ್ದಾರೆ.
ಕಾಲೇಜಿನಲ್ಲಿ ಇವರು ಆಡಿದ್ದೇ ಆಟ…ಹೇಳೋರು ಕೇಳೋರಿಲ್ಲ. ಸರ್ಕಾರ ಇವರಿಗೆ ಲಕ್ಷಾಂತರ ರೂ. ಸಂಬಳ ಕೊಟ್ಟು ವಿದ್ಯಾರ್ಥಿಗಳಿಗೆ ಒಳ್ಳೆ ಮೌಲ್ಯಗಳನ್ನು ಹೇಳಲಿ ಅಂತ.ಆದರೆ ಕಾಲೇಜಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ…ಮೇಲಾಧಿಕಾರಿಗಳು ಸಚಿವರು..ಈ ಕೊಪ್ಪಳ ಭಾಗದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕಾಗಿದೆ…ಕೇವಲ ನೆಪ ಮಾತ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ರೆ ಸಾಲದು.