ಹರಪನಹಳ್ಳಿ:
ಟಾಟಾ ಏಸ್ ವಾಹನ ಡಿಕ್ಕಿ ಸಂಭವಿಸಿ ಅಂದಾಜು 40 ಕುರಿಗಳು ಸಾವನ್ನಪ್ಪಿ ಅನೇಕ ಕುರಿಗಳು ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ತಾಲೂಕಿನ ಉಚ್ಚಂಗಿದುರ್ಗದ ಬಳಿ ಶುಕ್ರವಾರ ರಾತ್ರಿ ಜರುಗಿದೆ.
ಕುರಿಗಳು ಅಡವಿಯಿಂದ ಮೇಯ್ದು ಉಚ್ಚಂಗಿದುರ್ಗ ಹಾಗೂ ಮಡಕಿ ನಿಚ್ಚಾಪುರ ರಸ್ತೆಯಲ್ಲಿ ಹೋಗುವಾಗ ಉಚ್ಚಂಗಿದುರ್ಗದಿಂದ ಹರಪನಹಳ್ಳಿ ಕಡೆ ಹೊರಟಿದ್ದ ಟಾಟಾ ಎಸಿ ವಾಹನ ಕುರಿ ಹಿಂಡಿಗೆ ಡಿಕ್ಕಿ ಹೊಡೆದಿದೆ.
ಉಚ್ಚಂಗಿದುರ್ಗದ ರೇವಣ ಎಂಬುವವರಿಗೆ ಕುರಿಗಳು ಸೇರಿದ್ದಾಗಿವೆ ಎಂದು ಹೇಳಲಾಗಿದೆ. ಈ ಕುರಿತು ಅರಸಿಕೇರಿ ಠಾಣೆಗೆ ರೇವಣ್ಮ ದೂರು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ