ಪುನೀತ್ ಎಂ.ಎನ್ ನಿರ್ಮಿಸುತ್ತಿರುವ ಕವಿ ಚಿತ್ರದ ಸೆನ್ಸಾರ್ ಕೂಡ ಮುಗಿದಿದ್ದು, ಬಿಡುಗಡೆಗೆ ಸಿದ್ದವಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದೊಂದು ಟ್ಯಾಲೆಂಟ್ ಇರುತ್ತದೆ. ಆ ವ್ಯಕ್ತಿ ಜಗತ್ತನ್ನೇ ಬೆಳಗುವ ವ್ಯಕ್ತಿಯಾಗುತ್ತಾನೆ. ಒಬ್ಬ ಪೊರ್ಕಿ ಯುವಕ ಹೇಗೆ ಕವಿಯಾಗುತ್ತಾನೆ ಎಂಬ ಕಥೆಯ ಅಂಶವನ್ನಿಟ್ಟುಕೊಂಡು ಮಾಡಿರುವ ಈ ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಎಂ.ಎಸ್. ತ್ಯಾಗರಾಜು ಕಥೆ, ಸಂಗೀತ ನಿರ್ದೇಶನದೊಂದಿಗೆ ನಿರ್ದೇಶನ ಕೂಡ ಮಾಡಿರುವ ಈ ಚಿತ್ರಕ್ಕೆ ಶರತ್ಕುಮಾರ್, ಕಾರ್ತಿಕ್ ಶರ್ಮ ಛಾಯಾಗ್ರಹಣ, ಧನು ಆರ್. ಸಂಭಾಷಣೆ, ಮಧುಸೂದನ್, ಪ್ರೇಮ್ಋಷಿ, ಎಂ.ಎಸ್. ತ್ಯಾಗರಾಜ್ ಸಾಹಿತ್ಯ, ಸಿ.ರವಿಚಂದ್ರನ್ ಸಂಕಲನ, ಜಯಪ್ರಕಾಶ್ ನ್ಯತ್ಯ ನಿರ್ದೇಶನ, ಪುನೀತ್ಗೌಡ, ಶೋಭಿತಾ ಶಿವಣ್ಣ, ಸ್ನೇಹ, ಉಮೇಶ್, ರಾಕ್ಲೈನ್ ಸುಧಾಕರ್, ಮಹೇಶ್ ಇನ್ನು ಮುಂತಾದವರ ತಾರಾಬಳಗವಿದೆ.