ಇದೇ ತಿಂಗಳಲ್ಲಿ ಬರಲಿದ್ದಾನೆ “ಕವಿ”

     ಪುನೀತ್ ಎಂ.ಎನ್ ನಿರ್ಮಿಸುತ್ತಿರುವ ಕವಿ ಚಿತ್ರದ ಸೆನ್ಸಾರ್ ಕೂಡ ಮುಗಿದಿದ್ದು, ಬಿಡುಗಡೆಗೆ ಸಿದ್ದವಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದೊಂದು ಟ್ಯಾಲೆಂಟ್ ಇರುತ್ತದೆ. ಆ ವ್ಯಕ್ತಿ ಜಗತ್ತನ್ನೇ ಬೆಳಗುವ ವ್ಯಕ್ತಿಯಾಗುತ್ತಾನೆ. ಒಬ್ಬ ಪೊರ್ಕಿ ಯುವಕ ಹೇಗೆ ಕವಿಯಾಗುತ್ತಾನೆ ಎಂಬ ಕಥೆಯ ಅಂಶವನ್ನಿಟ್ಟುಕೊಂಡು ಮಾಡಿರುವ ಈ ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಎಂ.ಎಸ್. ತ್ಯಾಗರಾಜು ಕಥೆ, ಸಂಗೀತ ನಿರ್ದೇಶನದೊಂದಿಗೆ ನಿರ್ದೇಶನ ಕೂಡ  ಮಾಡಿರುವ ಈ ಚಿತ್ರಕ್ಕೆ ಶರತ್‍ಕುಮಾರ್, ಕಾರ್ತಿಕ್ ಶರ್ಮ ಛಾಯಾಗ್ರಹಣ, ಧನು ಆರ್. ಸಂಭಾಷಣೆ, ಮಧುಸೂದನ್, ಪ್ರೇಮ್‍ಋಷಿ, ಎಂ.ಎಸ್. ತ್ಯಾಗರಾಜ್ ಸಾಹಿತ್ಯ, ಸಿ.ರವಿಚಂದ್ರನ್ ಸಂಕಲನ, ಜಯಪ್ರಕಾಶ್ ನ್ಯತ್ಯ ನಿರ್ದೇಶನ, ಪುನೀತ್‍ಗೌಡ, ಶೋಭಿತಾ ಶಿವಣ್ಣ, ಸ್ನೇಹ, ಉಮೇಶ್, ರಾಕ್‍ಲೈನ್ ಸುಧಾಕರ್, ಮಹೇಶ್ ಇನ್ನು ಮುಂತಾದವರ ತಾರಾಬಳಗವಿದೆ.

Recent Articles

spot_img

Related Stories

Share via
Copy link
Powered by Social Snap