ಶಿಗ್ಗಾವಿ :
ಸವಣೂರ ತಾಲೂಕಿನ ಗೋನಾಳ ಗ್ರಾಮದ ಶಾ ಕಲಿಮುಲ್ಲಾ ಖಾದ್ರಿ ಸಮೀತಿ ವತಿಯಿಂದ ಹಜರತ್ ಇಮಾಮೆ ಹುಸೇನ್ ಶರಣರ ನೆನಪಿನ ಹಾಗೂ ಕಲಿಮುಲ್ಲಾ ಶಾ ಖಾದ್ರಿ ಗುರುಗಳ ಸಾನಿದ್ಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಭಿರದ ಪ್ರಯುಕ್ತ ಶಿಗ್ಗಾವಿ ಪಟ್ಟಣದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು.
ಈ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆ ವೈದ್ಯ ಡಾ. ಹನುಮಂತಪ್ಪ ಪಿ ಎಚ್, ವಿವಿಧ ವೈದ್ಯರಾದ ಡಾ. ಸತೀಶ ಎನ್ ಡಿ, ಡಾ. ಸಿ ವಿ ಹುಡೇದ, ಮಲಿಕಜಾನ್ ದೊಡ್ಡಮನಿ, ಶರೀಫ ಸಾಬ್ ದೊಡ್ಡಮನಿ, ಶರೀಫಸಾಬ್ ಕಲಘಟಗಿ, ಇಮಾಮ್ ಸಾಬ್ ಕಟ್ಟಮನಿ, ಮಹಮ್ಮದಅಲಿ ಕರೀಮನವರ, ಮೌಲಾಸಾಬ್ ಆನೀಯವರ, ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ಸೇರಿದಂತೆ ಅನೇಕರು ಹಾಜರಿದ್ದರು.