ಬೆಂಗಳೂರು
ಕುಕ್ಕರ್ನಲ್ಲಿದ್ದ ನೀರನ್ನು ಕೆಳಗೆ ಚೆಲ್ಲಲು ಹೋದಾಗ ಅದರಲ್ಲಿದ್ದ ಪಾತ್ರೆ ಬೀಳುತ್ತಿದ್ದುದನ್ನು ಹಿಡಿಯಲು ಹೋದ ಯುವಕನೊಬ್ಬರು ಎರಡನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಹುಳಿಮಾವುವಿನ ಅವನಿ ಸಂಜೀವಿನಿ ನಗರದ ರಘುರಾಮ್ (35)ಎಂದು ಗುರುತಿಸಲಾಗಿದೆ. ಪೋರ್ಟಿಸ್ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿದ್ದ ಪತ್ನಿಯ ಜೊತೆ ರಘುರಾಮ್ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.ಕೆಲಸ ಮುಗಿಸಿಕೊಂಡು ಪತ್ನಿ ತಡವಾಗಿ ಬಂದಿದ್ದು, ರಾತ್ರಿ 12.30ರ ವೇಳೆ ಊಟ ಮುಗಿದ ನಂತರ ಕುಕ್ಕರ್ನಲ್ಲಿದ್ದ ನೀರನ್ನು ಹೊರಚೆಲ್ಲಲು ಹೋಗಿದ್ದಾರೆ .ಅದರೊಳಗಿದ್ದ ಪಾತ್ರೆಯು ಕೆಳಗೆ ಬೀಳುತ್ತಿದ್ದು, ಅದನ್ನು ಹಿಡಿಯಲು ಹಾರಿದ ರಘುರಾಮ್ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪಿಯುಸಿ ಮುಗಿಸಿದ್ದ ರಘುರಾಮ್ ಸ್ವಯಂ ಉದ್ಯೋಗ ಮಾಡಲು ತಯಾರಿ ನಡೆಸಿದ್ದರು.ಪ್ರಕರಣ ದಾಖಲಿಸಿರುವ ಹುಳಿಮಾವು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ