ಕಾಮಿಡಿಯಲ್ಲೇ, ‘ಇಗೋ’ ಮರೆಸುವ ‘ ಶೈಲಜಾರೆಡ್ಡಿ ಅಲ್ಲುಡು ‘

 Image result for sailaja reddy alludu

     ಟಾಲಿವುಡ್‍ನ ಅಕ್ಕಿನೇನಿ ಕುಟುಂಬದಿಂದ ತಂದೆ ನಂತರ ವಾರಸತ್ವದಲ್ಲಿ ಸಿನಿ ಅಂಗಳಕ್ಕೆ ಬಂದ ಅಕ್ಕಿನೇನಿ ನಾಗಚೈತನ್ಯ, ಲವರ್ ಬಾಯ್ ಆಗಿ ಕಾಲೇಜು ಸ್ಟೂಡೆಂಟ್ ಆಗಿ, ಮಾಸ್ ಹೀರೋ ಆಗಿ ಎಲ್ಲಾ ರೀತಿಯ ಚಿತ್ರಗಳನ್ನು ಮಾಡಿದ್ದಾನೆ. ಈಗ ಅದೇ ರೀತಿ ಇಗೋಯಿಂದ ಕೂಡದ ಹಿರೋಯಿನ್‍ಳನ್ನು ಪ್ರೀತಿ ಮಾಡುವಂತೆ ಮಾಡಲು ತಾನು ಬೀಳುವ ಕಷ್ಟಗಳು ಮತ್ತು ಪ್ರೀತಿಸಿದ ನಂತರ ನಡೆಯುವ ಸಂಘಟನೆಗಳ ಮೂಲಕ ಕೊನೆಗೆ ಹೇಗೆ ಎಲ್ಲರೂ ಒಂದಾಗುತ್ತಾರೆ ಎಂಬ ರೋಚಕ ಕಥನ ಇದಾಗಿದೆ.

      ತಂದೆಯ ಇಗೋಯಿಂದ ತಂಗಿಯ ಮದುವೆ ಕ್ಯಾನ್ಸಲ್ ಆಗುತ್ತೆ. ಅದೇ ರೀತಿ ನಾಯಕ ನಟಿಯ ಹಾಗೂ ತನ್ನ ತಾಯಿಯ ಇಗೋಯಿಂದ ಮಾತುಕತೆ ಇಲ್ಲದೆ ಒಂದೇ ಮನೆಯಲ್ಲಿ ಇರುತ್ತಾರೆ. ಈ ಇಗೋ ಎಂಬ ಪದದಿಂದ ಆಗುವ ವಿವಿಧ ಘಟನಾವಳಿಗಳೇ ಶೈಲಜಾರೆಡ್ಡಿ ಅಲ್ಲುಡು ಚಿತ್ರದ ಕಥನಾಂಶವಾಗಿದೆ.

Image result for sailaja reddy alludu

      ಶೈಲಜಾರೆಡ್ಡಿ ಅಲ್ಲುಡು ಎಂಬ ಚಿತ್ರ ಗಣೇಶ ಚತುರ್ಥಿಯಂದು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಹಬ್ಬದ ವೇಳೆ ಚಿತ್ರಗಳು ಬಿಡುಗಡೆಯಾದರೆ ಯಾರು ತಾನೆ ಸಿನಿಮಂದಿರಗಳಿಗೆ ನುಗ್ಗಲ್ಲ ಹೇಳಿ. ಅದೇ ರೀತಿ ಗುರುವಾರ ಬಿಡುಗಡೆಗೊಂಡ ಶೈಲಜಾರೆಡ್ಡಿ ಚಿತ್ರಕ್ಕೆ ಉತ್ತಮ ಓಪನಿಂಗ್ಸ್ ದೊರೆತಿದೆ. ಇನ್ನೂ ಚಿತ್ರದ ಅಂಶಗಳನ್ನು ನೋಡುವುದಾರೆ, ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಇಗೋ ಪರ್ಸನ್ಸ್.

     ನಾಯಕ ನಟನ ನಾಗಚೈತನ್ಯ ಅವರ ತಂದೆಗೆ ತುಂಬಾ ಇಗೋ. ಯಾರೇ ಆದರೂ ತನ್ನತ್ತ ಬರಬೇಕೆ ಹೊರತು ತಾನು ಯಾರ ಮುಂದೆ ತಲೆ ಬಾಗುವುದಿಲ್ಲ ಎಂಬಷ್ಟು ಇಗೋ ಇರುತ್ತದೆ. ಅದೇ ರೀತಿ ನಾಯಕ ನಟಿ ಅನು ಇಮ್ಮಾನುವೇಲ್ ರಿಗೂ ಕೂಡ ಮೈತುಂಬ ಇಗೋ. ಯಾವುದೇ ಕೆಲಸ ಮಾಡಬೇಕಾದರೆ ಹಣ್ಣು ತಿನ್ನಿಸಲು ಕೂಡ ಇನ್ನೊಬ್ಬರು ಬೇಕು. ಅಷ್ಟರ ಮಟ್ಟಿಗೆ ಇಗೋ ಜಾಸ್ತಿ. ನಾಯಕ ನಟಿಗೆ ಇಷ್ಟೊಂದು ಇಗೋ ಇರಬೇಕಾದರೆ ನಟಿಯ ತಾಯಿಯಾದವಳಿಗೆ ಇನ್ನೆಷ್ಟು ಇಗೋ ಇರಬಹುದು. ಹೌದು, ತನ್ನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡ ರಮ್ಯಕೃಷ್ಣ ಅವರಿಗೂ ತುಂಬಾನೆ ಇಗೋ ಇರುತ್ತದೆ. ಇಗೋ ಪರ್ಸನ್‍ಗಳ ನಡುವೆ ಹೇಗೆ ಜೀವನ ನಡೆಸುತ್ತಾನೆ ಎಂಬುದೇ ನಾಯಕನಟನ ಪರೀಕ್ಷೆ.

ಇಗೋದಿಂದಲೇ ನಾಯಕ ನಟನ ಎಂಗೇಜ್‍ಮೆಂಟ್, ತನ್ನ ತಂಗಿಯ ಮದುವೆಗೆ ವಿರೋಧ:

Image result for sailaja reddy alludu

      ಸಿನಿಮಾ ಪ್ರಾರಂಭದಲ್ಲೇ ನಾಯಕ ನಟನ ತಂಗಿಯನ್ನು ನೋಡಲು ಬರುವವರಿಗೆ ತನ್ನ ತಂದೆ ಇಗೋದಿಂದ ಮಾತನಾಡುವ ಮಾತುಗಳಿಂದ ಮದುವೆ ಮುರಿದುಬೀಳುತ್ತದೆ. ನಂತರ ನಾಗಚೈತನ್ಯ ವಾಸ ಮಾಡುವ ಮನೆಯ ಪಕ್ಕಕ್ಕೆ ಬರುವ ನಟಿ ಅನುರನ್ನು ನೋಡಿ ಪ್ರೀತಿಗೆ ಬೀಳುತ್ತಾನೆ ನಟ. ಆದರೆ ಆ ನಟಿಗೂ ಇಗೋ ಹೆಚ್ಚಾಗಿರುವುದನ್ನು ಕಂಡುಕೊಂಡ ಚೈತನ್ಯ ಅವಳನ್ನು ಹೇಗಾದರೂ ಮಾಡಿ ಪ್ರೀತಿ ಮಾಡುವಂತೆ ಮಾಡಿಕೊಳ್ಳಲು ತಾನು ಮಾಡುವ ಸಾಹಸಗಳು ನೋಡುಗರಿಗೆ ಮನರಂಜನೆ ನೀಡುತ್ತದೆ. ಕೊನೆಗೆ ನಟನ ತಂದೆ ಮುರುಳಿಶರ್ಮಾಗೆ ಉನ್ನತ ಹುದ್ದೆ ಲಭಿಸಿದಂತಾ ಸಂದರ್ಭದಲ್ಲಿ ಇಗೋದಿಂದ ಚೈತನ್ಯ ಹಾಗೂ ಅನುಗೆ ಎಂಗೇಜ್‍ಮೆಂಟ್ ಮಾಡಿಕೊಳ್ಳುತ್ತಾರೆ. ಅಲ್ಲಿಂದ ತನ್ನ ತಾಯಿಯತ್ತ ಸಾಗುವ ನಟಿಯನ್ನು ಕರೆತರಲು ಹೋಗುತ್ತಾನೆ ನಟ. ಇದು ಸಿನಿಮಾದ ಪಸ್ಟ್ ಆಫ್ ಆದರೆ ಇನ್ನು ಸೆಕೆಂಡ್ ಆಪ್ ಮತ್ತಷ್ಟು ರೋಮಾಂಚನಕಾರಿಯಾಗಿರುತ್ತದೆ.

ತಾಯಿ ಮಗಳ ಇಗೋದಲ್ಲಿ ನರಳಾಡುವ ನಟ ಚೈತನ್ಯ : 

Related image

      ಸೆಕೆಂಡ್ ಆಫ್‍ನಲ್ಲಿ ನಟಿ ಅನು ಇಮ್ಮಾನಿವೇಲ್‍ಗಾಗಿ ವರಂಗಲ್‍ಗೆ ಹೋಗುವ ನಟ ಚೈತನ್ಯ ನಟಿಯ ಪರಸ್ಥಿತಿಯನ್ನು ಅರಿತು ಇಬ್ಬರನ್ನಹು ಮಾತನಾಡುವಂತೆ ಮಾಡಲು ತಾನು ಬೀಳುವ ಪ್ರಯತ್ನಗಳು ಚೆನ್ನಾಗಿ ಮೂಡಿಬಂದಿದೆ. ಡಾಕ್ಟರ್ ಆದವನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಬೇಕೆಂಬ ಹಂಬಲ ರಮ್ಯಾಕೃಷ್ಣರದ್ದು, ಆದರೆ ತನ್ನ ಮಗಳೊಂದಿಗೆ ಮಾತನಾಡದ ಸ್ಥಿತಿ. ಮಾತನಾಡಿಸಲು ಅಡ್ಡ ಬರುತ್ತದೆ. ಇದರ ನಡುವೆ ನಿಜವನ್ನು ತಿಳಿದುಕೊಳ್ಳುವ ರಮ್ಯಾಕೃಷ್ಣಾಗೆ ನಟ ಚೈತನ್ಯ ಹೇಳುವ ಮಾತಿಗಳು ಮನಸ್ಸಿಗೆ ತಾಗುತ್ತವೆ. ಇದರಿಂದ ಬದಲಾಗುವ ರಮ್ಯಾಕೃಷ್ಣ ನಾಯಕನಟ ತಂಗಿಗೆ ತಾನು ಇಷ್ಟಪಟ್ಟ ಹುಡುಗಿಯೊಂದಿಗೆ ಮದುವೆ ನಿಶ್ಚಯ ಮಾಡುತ್ತಾಳೆ. ನಂತರ ಚೈತನ್ಯನ ತಂದೆಗೆ ಕರೆ ಮಾಡಿ ಅಲ್ಲಿಗೆ ಬರುವಂತೆ ಮಾಡುತ್ತಾಳೆ. ಅಲ್ಲಿ ತಾನು ಕೂಡ ರಮ್ಯಾಕೃಷ್ಣ ಮಾತಿಗೆ ಮರುಳಾಗಿ ಇಬ್ಬರ ಮದುವೆಗೆ ಒಪ್ಪುತ್ತಾನೆ. ಇದೇ ಈ ಚಿತ್ರದ ಕ್ಲೈಮಾಕ್ಸ್ ಆಗಿದೆ.

ನಿರ್ದೇಶಕನ ಉತ್ತಮ ಟ್ಯಾಲೆಂಟ್ :

      ಚಿತ್ರದ ಕಥನಾಂಶ ಕೇವಲ ಇಗೋ ಆಗಿದ್ದರೂ ಅದನ್ನು 2 ಗಂಟೆ 15 ನಿಮಿಷಕ್ಕೆ ಎಳೆದ ನಿರ್ದೇಶನ ಚೆನ್ನಾಗಿದೆ. ಚಿತ್ರದುದ್ದಕ್ಕೂ ಪ್ರೀತಿಯ ನಡುವೆ ಬರುವ ಕಾಮಿಡಿ ಸನ್ನಿವೇಶಗಳು ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನೂ ಅಷ್ಟಕಷ್ಟೇ ಎನ್ನುವ ಹಾಡುಗಳು ಕೂಡ ಸ್ವಲ್ಪ ಮಟ್ಟಿಗೆ ಮನರಂಜಿಸುತ್ತವೆ.

ತಾರಾಗಣ :

  • ನಾಗಚೈತನ್ಯ
  • ಅನುಇಮ್ಮಾನುವೇಲ್
  • ರಮ್ಯಾಕೃಷ್ಣ
  • ನರೇಶ್
  • ವೆನ್ನೆಲ ಕಿಶೋರ್
  • ಮುರಳೀಶರ್ಮಾ

ನೀವು ಒಮ್ಮೆ ಚಿತ್ರಮಂದಿರಕ್ಕೆ ಭೇಟಿ ನೀಡಿ ಚಿತ್ರವನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap