ಕುಣಿಗಲ್
ಉಪ ಮುಖ್ಯಮಂತ್ರಿ ಜಿ.ಎಸ್. ಪರಮೇಶ್ವರ್ ಅವರು ಪಟ್ಟಣದ ಜಿಕೆಬಿಎಂಎಸ್ ಆಟದ ಮೈದಾನಕ್ಕೆ ಬೇಟಿ ನೀಡಿ ಕ್ರಿಕೇಟ್ ಅಭಿಮಾನಿಗಳಿಗೆ ಅಭಿನಂದಿಸಿದರು.
ಉಪ ಮುಖ್ಯಮಂತ್ರಿ ಜಿ.ಎಸ್. ಪರಮೇಶ್ವರ್ ಅವರು ಹುತಾತ್ಮರಾದ ಸಿಆರ್ಪಿಎಫ್ನ ವೀರಯೋಧ ಮಂಡ್ಯಾದ ಗುರು ಇವರ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಲು ತೆರಳುವ ಮಾರ್ಗಮಧ್ಯ ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ಜಿಎಸ್ಪರಮೇಶ್ವರ್ ಯುವ ಸೇನೆಯ ವತಿಯಿಂದ ಕಳೆದ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಟೆನ್ನೀಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ತಂಡಗಳಿಗೆ ಶುಭಕೋರಿ ಮಾತನಾಡುತ್ತ ಭಾರತದ ಗಡಿಯಲ್ಲಿ ಉಗ್ರಗಾಮಿಗಳಿಂದ ನಡೆದಿರುವ ದುರಂತವನ್ನು ಖಂಡಿಸಿದರು. ನಾನು ಇದೀಗ ಮಂಡ್ಯಾ ಜಿಲ್ಲೆಯ ಗುಡಿಗೆರೆ ಗ್ರಾಮಕ್ಕೆ ಹೋಗುವ ದಾರಿ ಮಧ್ಯ ಬಂದು ತಮ್ಮನ್ನು ನೋಡಿ ಶುಭಹಾರೈಸಿ ಹೋಗೋಣ ಎಂದು ಬಂದಿದ್ದೇನೆ ಎಂದು ತೆರಳಿದರು.
ಈ ಸಂದದರ್ಭದಲ್ಲಿ ಶಾಸಕ ಡಾ.ರಂಗನಾಥ್, ಪುರಸಭಾ ಸದಸ್ಯ ರಂಗಸ್ವಾಮಿ ಜಿಎಸ್ಪರಮೇಶ್ವರ್ ಯುವ ಸೇನೆಯ ರಾಜ್ಯಾಧ್ಯಕ್ಷ ನಗುತಾರಂಗನಾಥ, ಕಾಂಗ್ರೆಸ್ನ ಶೇಷ, ಹಮೀದ್ ಸೇರಿದಂತೆ ಕ್ರಿಕೇಟ್ ತಂಡದಲ್ಲಿ ಭಾಗವಹಿಸಲು ಬಂದಿದ್ದ ಆಟಗಾರರು ಉಪಸ್ಥಿತರಿದ್ದರು.