ನಾಳೆ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ: ಸಚಿವ ವೆಂಕಟರಮಣಪ್ಪ ಉದ್ಘಾಟನೆ

ಚಳ್ಳಕೆರೆ

               ಶಿಕ್ಷಣ ಕ್ಷೇತ್ರದ ಕ್ರಾಂತಿಪುರುಷ ಡಾ.ಸರ್ವಪಲ್ಲಿ ರಾಧಕೃಷ್ಣನ್‍ರವರ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆ.5ರ ಬುಧವಾರ ಬೆಳಗ್ಗೆ 11ಕ್ಕೆ ಇಲ್ಲಿನ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ತಿಳಿಸಿದ್ಧಾರೆ.
               ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಕಾರ್ಮಿಕ ಸಚಿವರಾದ ಎಚ್.ವೆಂಕಟರಮಣಪ್ಪ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಟಿ.ರಘುಮೂರ್ತಿ ವಹಿಸಲಿದ್ದಾರೆ. ನಿವೃತ್ತ ಶಿಕ್ಷಕರಿಗೆ ಸನ್ಮಾನವನ್ನು ಶಾಸಕ ಶ್ರೀರಾಮುಲು ನೆರವೇರಿಸಲಿದ್ದು, ಬೆಳಗ್ಗೆ 9ಕ್ಕೆ ಪ್ರವಾಸಿ ಮಂದಿರದಿಂದ ಆಗುವ ಮೆರವಣಿಗೆಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ಕವಿತಾ ರಾಮಣ್ಣ ಉದ್ಘಾಟಿಸುವರು. ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ವಿಶ್ರಾಂತ ಕುಲ ಸಚಿವ ಡಾ.ಶ್ರೀಕಂಠಕೂಡಿಗಿ ನೆರವೇರಿಸುವರು. ಮುಖ್ಯ ಶಿಕ್ಷಕರಾದ ಕೆ.ಎಸ್.ಸುರೇಶ್, ಅಕ್ಷರ ದಾಸೋಹ ಅಧಿಕಾರಿ ಆರ್.ಹನುಮಂತರಾಯ, ವಿಷಯ ಪರಿವೀಕ್ಷಕ ಎಚ್.ಗೋವಿಂದಪ್ಪನವರನ್ನು ಸನ್ಮಾನಿಸಲಾಗುವುದು.
               ವಿಶೇಷ ಆಹ್ವಾನಿತರಾಗಿ ಡಿಡಿಪಿಐ ಎ.ಜೆ.ಅಂದೋನಿ, ಸಿಟಿಇ ಪ್ರಭಾರೆ ಪ್ರಾಂಶುಪಾಲ ಎಂ.ರೇವಣಸಿದ್ದಪ್ಪ, ಡೆಯಟ್ ಉಪನಿರ್ದೇಶಕ ಕೆ.ಕೋದಂಡರಾಮ, ಡಿವೈಎಸ್ಪಿ ಎಸ್.ರೋಷನ್ ಜಮೀರ್, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಪ್ರಾಂಶುಪಾಲರಾದ ಪ್ರೊ.ಜಿ.ವೆಂಕಟೇಶ್, ಪಿ.ಎನ್.ಕೃಷ್ಣಪ್ರಸಾದ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಭಾಗವಹಿಸಲಿದ್ದು, ತಾಲ್ಲೂಕಿನ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ ವಿನಂತಿಸಲಾಗಿದೆ.

Recent Articles

spot_img

Related Stories

Share via
Copy link
Powered by Social Snap