ನವದೆಹಲಿ :
ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಪಾರ್ಥಿವ ಶರೀರವನ್ನು ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.
ಸುಮಾರು 12 ಕಿಮೀ ದೂರ ಮೆರವಣಿಗೆ ನಡೆಸಿ ಸಂಜೆ 4 ಗಂಟೆ ಬಳಿಕ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು. ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ಮಾಡಲಾಗುವುದು, ಪಾರ್ಥಿವ ಶರೀರಕ್ಕೆ ವಾಜಪೇಯಿ ಕುಟುಂಬಸ್ಥರು ಅಗ್ನಿ ಸ್ಪರ್ಶ ಮಾಡುವರು ಎನ್ನಲಾಗಿದೆ.
ವಾಜಪೇಯಿ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರದ ನಂತರ ಚಿತಾಭಸ್ಮವನ್ನು ಪವಿತ್ರ ನದಿಗಳಲ್ಲಿ ಬಿಡಲು ನಿರ್ಧರಿಸಲಾಗಿದ್ದು, ಇದು ವಾಜಪೇಯಿ ಅವರಿಗೆ ಉತ್ತರಪ್ರದೇಶ. ರಾಜ್ಯ ಸರ್ಕಾರವು ಅವರಿಗೆ ತೋರಿಸುವ ಗೌರವವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ