ಪೋಷಕರ ವಿರೋಧ: ಪ್ರೇಮಿಗಳು ಆತ್ಮಹತ್ಯೆ

 ದಾವಣಗೆರೆ:


      ಪೋಷಕರ ವಿರೋಧದಿಂದಾಗಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಪನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಭಾನುವಾರ ನಡೆದಿದೆ.

      ಶಶಿಕುಮಾರ್(23), ಕಾವ್ಯ (16) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಕಂಚಿಕೇರಿ ಗ್ರಾಮದ ಈ ಇಬ್ಬರು ಕಳೆದ ಆ.17ರ ರಾತ್ರಿ ಗ್ರಾಮ ಬಿಟ್ಟು ಬೇರೆಡೆಗೆ ತೆರಳಿದ್ದಾರೆ. ಇಬ್ಬರು ಮನೆಯವರು ಆ.18 ರಂದು ಹುಡುಕಾಟ ನಡೆಸಿದ್ದರು. ಆದರೆ ಆ.19 ರಂದು ಬೆಳಿಗ್ಗೆ ಹುಡುಗನ ಜಮೀನಿನಲ್ಲಿ ಯುವ ಪ್ರೇಮಿಗಳು ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.

      ಮೃತ ಕಾವ್ಯ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. ಒಂದೇ ಜನಾಂಗದ ಈ ಇಬ್ಬರು ಸಂಬಂಧದಲ್ಲಿ ಮಾವ, ಸೊಸೆ ಆಗಬೇಕಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಲಿದ್ದು, ಹುಡುಗ ಶಶಿಕುಮಾರನಿಗೆ ಅವರ ಮನೆಯವರು ಇನ್ನೊಬ್ಬ ಮಾವನ ಮಗಳನ್ನು ಮದುವೆ ಮಾಡಲು ಯೋಚಿಸಿದ್ದರು ಎನ್ನಲಾಗಿದೆ.

      ಇವರಿಬ್ಬರು ಸುಮಾರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿಗೆ ಇಬ್ಬರ ಪೋಷಕರಿಂದಲೂ ವಿರೋಧವಿದ್ದ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಆದರೆ, ಶನಿವಾರ ಗ್ರಾಮಕ್ಕೆ ಮರಳಿದ್ದ ಪ್ರೇಮಿಗಳು ಗ್ರಾಮದ ಹೊರ ವಲಯದ ಜಮೀನಿನಲ್ಲಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

            ಇವರ ಪ್ರೀತಿ ವಿಷಯ ಮನೆಯವರಿಗೆ ಗೊತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಮೃತ ಹುಡುಗನ ತಂದೆ ಪರಸಪ್ಪ ದೂರು ನೀಡಿದ್ದು,   ಸಿಪಿಐ ದುರುಗಪ್ಪ ಹಾಗೂ ಪಿಎಸ್ ಐ ಪ್ರಸಾದ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಕುರಿತು ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap