ಪ್ರೀತಿಗೆ ವಿರೋಧ : ಯುವತಿ ನೇಣಿಗೆ ಶರಣು

ಬೆಂಗಳೂರು:

      ನಗರದ ಪ್ರತಿಷ್ಠಿತ ಕಬ್ಬನ್ ಪಾರ್ಕ್‍ನಲ್ಲಿನ ಮರವೊಂದಕ್ಕೆ ಶನಿವಾರ ರಾತ್ರಿ ನೇಪಾಳಿ ಮೂಲದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರೀತಿಸಿದ ಹುಡುಗ ವಿವಾಹವಾಗಲು ನಿರಾಕರಿಸಿರುವುದೇ ಇದಕ್ಕೆ ಕಾರಣವಾಗಿದೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

      ಆಶೋಕನಗರದ ಡಿಸೋಜಾ ಲೇಔಟ್‍ನಲ್ಲಿ ವಾಸಿಸುತ್ತಿದ್ದ ಸಂತೋಷಿ(21) ಎಂದು ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಗುರುತಿಸಲಾಗಿದೆ. ವಿಠ್ಠಲ್ ಮಲ್ಯ ರಸ್ತೆಯ ಲೈಮ್‍ಲೈಟ್ ಸ್ಪಾನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷಿ ಹಾಗೂ ಅಲ್ಲಿಯೇ ಕೆಲಸ ಮಾಡುತ್ತಿದ್ದ ಆರ್‍ಟಿ ನಗರದ ನರೇಶ್ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು.

      ಇವರ ಪ್ರೀತಿಯ ವಿಚಾರ ಇಬ್ಬರ ಮನೆಯವರಿಗೆ ತಿಳಿದು ವಿವಾಹಕ್ಕೆ ಒಪ್ಪದಿದ್ದರೂ ಇಬ್ಬರ ಪ್ರೀತಿ ಮುಂದುವರೆದಿತ್ತು. ಆದರೆ ಕೆಲ ದಿನಗಳ ಹಿಂದೆ ನರೇಶ್ ವಿವಾಹವಾಗುವುದಿಲ್ಲ ಎಂದು ಹೇಳಿದ್ದರಿಂದ ಸಂತೋಷಿ ಆಕ್ರೋಶಗೊಂಡಿದ್ದಳು.

      ಇಬ್ಬರ ನಡುವೆ ಇದೇ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿದ್ದು, ಶನಿವಾರ ಮಧ್ಯಾಹ್ನ ಕಬ್ಬನ್‍ಪಾರ್ಕ್‍ಗೆ ಬಂದಿದ್ದ ಸಂತೋಪಿ ಹಾಗೂ ನರೇಶ್ ಇಬ್ಬರ ನಡುವೆ ವಿವಾಹದ ವಿಚಾರವಾಗಿ ಜೋರು ಜಗಳವಾಗಿ ರಸ್ತೆಗೆ ಬಂದಿದ್ದರು.

      ಸ್ಥಳೀಯರು ಜಗಳ ಬಿಡಿಸಿ ಇಬ್ಬರಿಗೂ ಬೈದು ಕಳುಹಿಸಿದ್ದರು. ಮನೆಗೆ ಹೋಗಿದ್ದ ಸಂತೋಪಿ ನರೇಶ್ ಜೊತೆ ವಿವಾಹ ಮಾಡಿ ಎಂದು ಪಟ್ಟು ಹಿಡಿದಿದ್ದಳು. ಸೆಕ್ಯೂರಿಟಿ ಗಾರ್ಡ್ ಆಗಿದ್ದ ತಂದೆ ಕಬಿರಾಜ್ ನಾವು ಹೊರಗಿನವರು ಇಲ್ಲಿನವರ ಜೊತೆ ಸಂಬಂಧ ಬೇಡ. ನರೇಶ್‍ನನ್ನು ಬಿಟ್ಟು ಬಿಡು, ನಿನಗೆ ನೇಪಾಳದ ಒಳ್ಳೆಯ ಹುಡುಗನನ್ನು ನೋಡಿ ವಿವಾಹ ಮಾಡುತ್ತೇನೆ ಎಂದು ಬುದ್ದಿವಾದ ಹೇಳಿದರೂ ಆಕೆ ಒಪ್ಪದಿದ್ದರಿಂದ ಆಕ್ರೋಶಗೊಂಡ ತಂದೆ ನನಗೆ ಮುಖ ತೋರಿಸಬೇಡ, ಮನೆಯಲ್ಲಿ ಇರಬೇಡ, ಎಲ್ಲಿಗಾದರೂ ಹೋಗು ಎಂದು ಬೈದಿದ್ದರು.

      ಇದರಿಂದ ನೊಂದ ಸಂತೋಷಿ ತಡರಾತ್ರಿ ಕಬ್ಬನ್ ಪಾರ್ಕ್‍ಗೆ ಬಂದು ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿಯ ದೇಹ ನೇತಾಡುತ್ತಿರುವುದನ್ನು ಭಾನುವಾರ ಬೆಳಗ್ಗೆ ಉದ್ಯಾನದ ಸಿಬ್ಬಂದಿ ಗಮನಿಸಿ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯು ಸಂತೋಷಿ(18) ಎಂದು ಕಂಡುಬಂದಿದು,್ದ ತಂದೆ ತಾಯಿಯನ್ನು ಕರೆಸಿ ವಿಚಾರಣೆ ನಡೆಸಿದಾಗ ಆತ್ಮಹತ್ಯೆಯ ಕಾರಣ ತಿಳಿದುಬಂದಿದೆ.

      ಸಂತೋಷಿ ಸಾವಿಗೆ ನರೇಶ್ ಕಾರಣನಾಗಿದ್ದು ಆತನನ್ನು ಬಂಧಿಸಿ ಕ್ರಮಕೈಗೊಳ್ಳುವಂತೆ ಅವರ ತಂದೆ ಕಬಿರಾಜ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಕಬ್ಬನ್‍ಪಾರ್ಕ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap