ಅರಸೀಕೆರೆ; ತಮ್ಮ ಆಪ್ತರ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಕಾಣಿಸಿಕೊಂಡ ಪ್ರಸಂಗ ಇಂದು ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಮ್ ಸೋಮ ಅವರು, ನನ್ನ ವಿರುದ್ದ ಆರೋಪ ಮಾಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕೈಯಲ್ಲಿ ಎಲ್ಲಾ ಇಲಾಖೆಗಳಿರುವುದರಿಂದ ಅಕ್ರಮ ಸಾಬೀತು ಪಡಿಸಲಿ ಎಂದು ಸವಾಲ್ ಹಾಕಿದರು. ನನ್ನ ವಿರುದ್ದದ ಅಕ್ರಮ ಸಾಬೀತು ಪಡಿಸಿದ್ದೇ ಆದಲ್ಲಿ ನಾನು ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಹೇಳಿದರು.ಇದೇ ವೇಳೆ ಉದಯ್ಗೌಡ ಕೂಡಾ ಉಪಸ್ಥಿತರಿದ್ದರು. ಕಳೆದ ಹಿಂದಿನ ದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಮ್ಸೋಮ, ಉದಯ್ಗೌಡ, ವಿಜಯ್ಕಿರಂಗದೂರು ಅವರ ವಿರುದ್ದ ಆಪರೇಷನ್ ಕಮಲದಲ್ಲಿ ಪಾಲ್ಗೊಂಡಿರುವ ಇವರು ಕ್ರಿಮಿನಲ್ಗಳು ಎಂದು ಆರೋಪಿಸಿದ್ದನ್ನು ನಾವು ಸ್ಮರಿಸಬಹುದಾಗಿದೆ.