ಭಾವೈಕ್ಯತೆ ಮೆರೆದ ಗಣೇಶೋತ್ಸವ

 ದಾವಣಗೆರೆ :

      ವಿನೋಬನಗರದ ಹ್ಯಾಪಿ ಫ್ರೆಂಡ್ಸ್ ಗ್ರೂಪ್ ವತಿಯಿಂದ ನಿನ್ನೆ ನಗರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮವನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಮಹಿಳೆಯರು ಸೇರಿ ಭಾವೈಕ್ಯತೆಯ ದಾವಣಗೆರೆ ನಗರಕ್ಕೆ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರಗನ್ನು ಕೊಟ್ಟಿದ್ದಾರೆ.

      ವಿನೋಬನಗರದ ಹ್ಯಾಪಿ ಫ್ರೆಂಡ್ಸ್ ಗ್ರೂಪ್ ವತಿಯಿಂದ ಸತತ 7 ವರ್ಷಗಳಿಂದ ಗಣೇಶೋತ್ಸವವವನ್ನು ಅಧ್ಯಕ್ಷರಾದ ಶ್ರೀನಿವಾಸ ದಾಸಕರಿಯಪ್ಪ ಇವರ ನೇತೃತ್ವದಲ್ಲಿ ಅವರ ಸದಸ್ಯರುಗಳು ದಾವಣಗೆರೆಯಲ್ಲಿಯೇ ಸಮ್ಮಿಲನವಾಗಿ ಈ ಗಣೇಶೋತ್ಸವ ಕಾರ್ಯಕ್ರಮಕ್ಕೆ ಮೆರಗನ್ನು ಕೊಟ್ಟಿರುತ್ತಾರೆ.

     ನಿನ್ನೆ ನಡೆದ ಗಣೇಶೋತ್ಸವ ಪ್ರತಿಷ್ಠಾಪನೆಗೆ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಬಾಂಧವರು ಪಾಲ್ಗೊಂಡು ಈ ಗಣೇಶೋತ್ಸದ ಪ್ರತಿಷ್ಠಾಪನೆಗೆ ಯಶಸ್ಸನ್ನು ಗಳಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀನಿವಾಸ ದಾಸಕರಿಯಪ್ಪನವರು, ಅನಿಷ್ ಪಾಷಾ (ವಕೀಲರು), ಮೈಕಲ್, ರಾಕೇಶ್, ಮಂಜುನಾಥ್, ಕಿರಣ್, ಅರ್ಜುನ್, ಕೀರ್ತಿಕುಮಾರ್, ಜಾಕೀರ್, ದಾದೂ, ಮುಜಾಹಿದ್, ಫೈರೋಜ್, ತನ್ನು, ರಫೀಕ್, ಇಮ್ರಾನ್ ಬೇಕರಿ, ಫಯಾಜ್, ಅಮ್ಜದ್‍ಖಾನ್, ಚೇತನ್, ಭೈರೇಷ್, ಕಿಶೋರ್, ಪ್ರವೀಣ್, ಪುನಿತ್, ರಮೇಶ್, ರಾಜೇಶ್, ಸಚಿನ್, ಸಚಿನ್ ಘಾಟ್ಗೆ, ಶಿವಾಜಿ, ಸಂತೋಷ್, ಶಾರೂ, ಇಮ್ರಾನ್, ಪ್ರವೀಣ್, ಪುನಿತ್, ವಿನಯ್‍ಪವಾರ್, ವಿನಯ್ ಡಲ್ಲೂ, ಬಾಲಾಜಿ, ಗುರುಸಾವಂತ್, ಚಂದನ್, ಪವನ್, ಅಕ್ಷಯ್, ಸಾಯಿಕುಮಾರ್, ಕವನ್, ಸಚಿನ್‍ರಾವ್, ಶಿವು, ವೀರೇಶ್ ಎ.ಆರ್., ತೇಜು, ರಾಕೇಶ್, ರವಿಕುಮಾರ್, ವಿನಯಕುಮಾರ್, ಸಂತೋಷ್, ಚಂದ್ರಶೇಖರ್, ವಿಶ್ವನಾಥ, ಶಾರೂಖ್, ನಾಗೂ, ಅವಿನಾಷ್, ಗೋಪಿ, ಸುನೀಲ್, ಸಚಿನ್, ನಟರಾಜ್, ಶ್ರೀಧರ್, ಶಾಂತಕುಮಾರ್, ಮನು, ರಘುನಾಥ್, ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap