ಮಳೆಯಿಂದಾಗಿ ಸೂರು ಕಳೆದುಕೊಂಡ ಅಂಬಾಳೆ ಗ್ರಾಮದ ನಿವಾಸಿಗಳು

ಚಿಕ್ಕಮಗಳೂರು:

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಿಕ್ಕಮಗಳೂರು ತಾಲೂಕಿನ ಅಂಬಳೆ ಗ್ರಾಮದ ಮನೆಗಳ ಗೋಡೆ ಕುಸಿದ್ದಿದ್ದು ಜನ ಕಂಗಾಲಾಗಿದ್ದಾರೆ.ಇದೇ ಗ್ರಾಮದ ಜಯಮ್ಮ ಎಂಬವವರ ಮನೆಯ ಗೋಡೆ ಸಂಪೂರ್ಣ ಕುಸಿದಿದ್ದು, ಮನೆಯಲ್ಲಿದ್ದ ವಸ್ತುಗಳು ಹಾನಿಗೊಳಗಾಗಿವೆ. ಈ ಘಟನೆಯಿಂದ ದಿಕ್ಕುಕಾಣದ ವೃದ್ಧೆ ಜಯಮ್ಮ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಅರಿಕೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದ್ದಿದ್ದು ಕುಟುಂಬವು ಪರಿಹಾರದ ನಿರೀಕ್ಷೆಯಲ್ಲಿದೆ .

ಮಲೆನಾಡನ ಪ್ರಾಂತ್ಯಗಳಲ್ಲಿ ಕೂಡ ಮಳೆ ರುದ್ರ ನರ್ತನ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೇರೂರು, ಮೇಗೂರು ಗ್ರಾಮದಲ್ಲಿ ಮೂರು ಮನೆಗಳ ಗೋಡೆ ಕುಸಿದಿವೆ.. ಮನೆಗಳ ಗೋಡೆ ಸಂಪೂರ್ಣ ಕುಸಿದು ಹೋಗಿರೋದ್ರಿಂದ ಮನೆಯವರು ಕಂಗಾಲಾಗಿದ್ದು, ಮನೆಯಲ್ಲಿದ್ದ ವಸ್ತುಗಳು ನಾಶವಾಗಿವೆ ಎಂದು ದುಖಿಸುತ್ತಿದ್ದಾರೆ . ನಾಶವಾದ ಬದುಕನ್ನು ಮತ್ತು ಮನೆಯನ್ನು ಕಟ್ಟಿಕೊಳ್ಳಲು ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ ಗ್ರಾಮದ ನಿವಾಸಿಗಳು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap