ಪಣಜಿ:
ಮಹದಾಯಿ ಕುರಿತ ನ್ಯಾಯಾಧಿಕರಣದ ಐತೀರ್ಪು ನಮ್ಮೆಲ್ಲರಿಗೂ ತೃಪ್ತಿ ತಂದಿದೆ ಎಂದಿದ್ದ ಗೋವಾ ಈಗ ಅಸಮಾಧಾನ ಹೊರಹಾಕಿದೆ . ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಪ್ರಕಾರ ಗೋವಾಕ್ಕೆ 24 ಟಿಎಂಸಿ ಅಡಿ ನೀರು , ಕರ್ನಾಟಕದ ಪಾಲಿಗೆ 13.42 ಟಿಎಂಸಿ ಅಡಿ ನೀರು, ಮಹರಾಷ್ಟ್ರ ಪಾಲಿಗೆ 1.30 ಟಿಎಂಸಿ ಅಡಿ ನೀರು ದೊರೆತಿದೆ ಎಂದು ಹೇಳಿದ್ದರು . ತೀರ್ಪು ಬಂದ ದಿನ ಸಂತೋಷದಿಂದಲೇ ಟ್ವೀಟ್ ಮಾಡಿದ್ದ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು, ನ್ಯಾಯಾಧಿಕರಣ ಕೊಟ್ಟ ತೀರ್ಪು ತೃಪ್ತಿ ತಂದಿದೆ, ಗೋವಾ ರಾಜ್ಯಕ್ಕೆ ನ್ಯಾಯ ದೊರೆತಿದೆ ಎಂದಿದ್ದರು.
ಗೋವಾ ರಾಜ್ಯದ ವಿರೋಧ ಪಕ್ಷವಾದ ಕಾಗ್ರೇಸ್ ನ್ಯಾಯಾಧಿಕರಣ ನೀಡಿದ ತೀರ್ಪಿನ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಸರ್ಕಾರದ ಮೇಲೆ ಒತ್ತಡ ಹಾಕಿರುವ ಕಾರಣ ಗೋವಾ ಸರ್ಕಾರವು ನ್ಯಾಯಾಧಿಕರಣ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಯೋಚನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಇದೇ ಬೆನ್ನಲೇ ಕರ್ನಾಟಕವು ಸಹ ಮೇಲ್ಮನವಿ ಸಲ್ಲಿಸುವ ಯೋಚನೆಯಲ್ಲಿದೇ ಎನ್ನಾಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ