ಮೈತ್ರಿ ಸರಕಾರ ಕೆಡವಲು ಬಿಜೆಪಿ ಷಡ್ಯಂತ್ರ : ಡಿಕೆಶಿ

ಬೆಂಗಳೂರು:

                ಮೈತ್ರಿ ಸರಕಾರ ಕೆಡವಲು ಬಿಜೆಪಿ ಷಡ್ಯಂತ್ರ್ಯ ನಡೆಸುತ್ತಿದೆ. ಮೈತ್ರಿ ಸರಕಾರದ 15 ರಿಂದ 20 ಶಾಸಕರನ್ನು ಸೆಳೆಯಲು ಆ ಪಕ್ಷದ ನಾಯಕರು ಯತ್ನ ನಡೆಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
                ಕಲ್ಬುರ್ಗಿಯ ಗಾಣಗಾಪುರದಲ್ಲಿ ದತ್ತಾತ್ರೇಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜತೆ ಭಾನುವಾರ ಮಾತಾಡಿದರು.
                 ಸಿ.ಪಿ. ಯೋಗೇಶ್ವರ ಮಾತ್ರವಲ್ಲ. ಅವರಂತಹ ಹಲವು ಜನರು ಆಪರೇಷನ್ ಕಮಲದಲ್ಲಿ ಸಕ್ರಿಯರಾಗಿದ್ದಾರೆ. ಬಿ.ಸಿ. ಪಾಟೀಲ್, ರಹೀಮ್ ಸೇರಿದಂತೆ ಅನೇಕ ಜನರನ್ನು ಸಂಪರ್ಕ ಮಾಡ್ತಿದ್ದಾರೆ. ಅವರು ಏನು ಮಾಡುತ್ತಾರೋ ಮಾಡಲಿ, ದೇವರಿದ್ದಾನೆ. ನಮ್ಮ ಪಕ್ಷದಲ್ಲಾಗಲಿ, ಸರಕಾರದಲ್ಲಾಗಲಿ ಯಾವುದೇ ಗೊಂದಲವಿಲ್ಲ. ಮೈತ್ರಿ ಸರ್ಕಾರ ರಚನೆ ಕುರಿತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ತೀರ್ಮಾನ. ಆ ತೀರ್ಮಾನಕ್ಕೆ ಸಿದ್ದರಾಮಯ್ಯ ಸೇರಿ ಎಲ್ಲರೂ ಬದ್ಧರಾಗಿದ್ದೇವೆ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
                 ದೇವರ ಸನ್ನಿಧಾನದಲ್ಲಿ ನಿಂತು ಮಾತಾಡ್ತಾ ಇದ್ದೀನಿ. ಕಳೆದ ವರ್ಷ ಆಗಸ್ಟ್ ನಿಂದ ಈಚೆಗೆ ಏನೇನಾಗಿದೆ ಎಂದು ನೀವೆ ನೋಡುತ್ತಿದ್ದೀರಿ. ಯಾರ್ಯಾರು ಏನೆಲ್ಲ ನೋವು ಕೊಟ್ಟರು, ಕೊಡುತ್ತಿದ್ದಾರೆ ಎಂಬುದಕ್ಕೂ ನೀವೆ ಸಾಕ್ಷಿಯಾಗಿದ್ದೀರಿ. ನಾನು ಯಾವುದೇ ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ. ನೋವು ಕೊಡುತ್ತಿರುವವರು ಸಂತೋಷವಾಗಿರಲಿ. ಆ ನೋವು ಭರಿಸುವ ಶಕ್ತಿಯನ್ನು ಭಗವಂತ ನನಗೆ ನೀಡಲಿ ಎಂದರು.
                  ನಮ್ಮ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ಬಹಳ ವೇಗವಾಗಿ ಹೋದರೆ ಅಪಘಾತವಾಗುತ್ತದೆ. ಹಾಗೆಂದೇ ನಿಧಾನವಾಗಿ ಹೋಗುತ್ತಿದ್ದೇವೆ. ನಿಧಾನವೇ ಪ್ರಧಾನ ಹಾಗೂ ಸ್ಥಿರ. ಭಗವಂತನ ಕೃಪೆ ಇದ್ದರೆ ಮುಂದೆ ನಾನೂ ಮುಖ್ಯಮಂತ್ರಿ ಆಗಬಹುದು. ಅದಕ್ಕೆ ಅವಸರವೇನೂ ಇಲ್ಲ. ಯಾವಾಗ ಏನೇನಾಗ ಬೇಕೋ ಅದಾಗುತ್ತದೆ. ಇಲ್ಲಿನ ಪವಿತ್ರ ದತ್ತಾತ್ರೆಯ ಪೀಠದ ಬಗ್ಗೆ ಬಹಳ ಕೇಳಿದ್ದೆ. ದತ್ತಾತ್ರೇಯ ದರ್ಶನವನ್ನು ಬಹಳ ದಿನದಿಂದ ಬಯಸಿದ್ದೆ. ಇಂದು ದರ್ಶನ ಭಾಗ್ಯದಿಂದ ಅದು ಈಡೇರಿದೆ. ದತ್ತಾತ್ರೇಯ ದರ್ಶನ ಮನಸ್ಸಿಗೆ ನೆಮ್ಮದಿ ನೀಡಿದೆ. ನಾನು ದೇವರ ಮೇಲೆ ನಂಬಿಕೆ ಇಟ್ಟಿರುವ ಮನುಷ್ಯ. ದೇವರೆ ನ್ಯಾಯ ಕೊಡುತ್ತಾನೆ ಎನ್ನುವ ವಿಶ್ವಾಸವಿದೆ ಎಂದರು.
                 ದತ್ತಪೀಠಕ್ಕೆ ಬರಲು ಎರಡು-ಮೂರು ಬಾರಿ ಅಂದುಕೊಂಡಿದ್ದರೂ ಸಾಧ್ಯವಾಗಿರಲಿಲ್ಲ. ಇಲ್ಲಿಗೆ ಬರಲು ನನ್ನ ಮನಸ್ಸು ಸೆಳೆಯುತ್ತಿತ್ತು. ಈ ಹೊತ್ತು ದರುಶನ ಭಾಗ್ಯ ಲಭಿಸಿತು. ನಮ್ಮ ಆಚಾರ, ವಿಚಾರವನ್ನು ಈ ಪೀಠದಲ್ಲಿ ಪರಿಪಾಲನೆ ಮಾಡ್ತಿರೋದು ತಿಳಿದು ಬಹಳ ಸಂತೋಷವಾಯಿತು. ಈ ದೇವರ ಮಹಿಮೆ ಬಗ್ಗೆ ನಾನೆ ಜ್ವಲಂತ ಸಾಕ್ಷಿ. ನಾನು ಏನು ಪ್ರಾರ್ಥನೆ ಮಾಡಿದೆ ಎನ್ನುವುದು ಭಕ್ತ ಮತ್ತು ಭಗವಂತನ ಮಧ್ಯೆ ನಡೆದದ್ದು. ಭಕ್ತ ಮತ್ತು ದೇವರ ನಡುವಣ ವ್ಯವಹಾರ ಅದು. ಅರ್ಚಕರ ಪ್ರಭಾವದಿಂದ ಶಿಲೆಯಲ್ಲೂ ಶಂಕರನ ಕಾಣಬಹುದಂತೆ. ಮಳೆ ಸಲುವಾಗಿ ಹಿಂದೆ ಶೃಂಗೇರಿಗೆ ಹೋಗಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದೆ. ಆಗ ಸುಮಾರು ಜನ ನನ್ನನ್ನು ಮಾಡಿದ್ದರು. ಹಾಗೆ ಟೀಕೆ ಮಾಡಿದವರು ದೇವರ ಹೆಸರನ್ನೇ ಇಟ್ಟು ಕೊಂಡಿದ್ದಾರೆ ಎಂದು ಛೇಡಿಸಿದರು.

Recent Articles

spot_img

Related Stories

Share via
Copy link
Powered by Social Snap