ತಿಪಟೂರು
ನಗರದ ವಾರ್ಡ್ ನಂಬರ್ 20, ದಸ್ತಗಿರಿಕಟ್ಟೆಯಲ್ಲಿ ಪ್ರಸ್ತುತ ಯು.ಜಿ.ಡಿ.ಕಾಮಗಾರಿ ನಡೆಯುತ್ತಿದೆ. ಆದರೆ ಎಲ್ಲಾ ಕಡೆಯು ರಸ್ತೆಯನ್ನು ಅಗೆದು ಮುಚ್ಚುತ್ತಿದ್ದು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ಶನಿಮಹಾತ್ಮದೇವರ ಹಿಂದಿನ ರಸ್ತೆಯಲ್ಲಿ ಯು.ಜಿ.ಡಿ. ಮ್ಯಾನ್ಹೋಲ್ ನಿರ್ಮಿಸಲು ಗುಂಡಿತೆಗೆದು 20 ದಿನಗಳು ಕಳೆದರೂ ಇನ್ನು ಮ್ಯಾನ್ಹೋಲ್ ನಿರ್ಮಿಸಿಲ್ಲ. ಏಕೆಂದರೆ ಈ ಗುಂಡಿಯು ಎತ್ತರದ ಪ್ರದೇಶದಲ್ಲಿದ್ದು ಇಲ್ಲಿ ಈಗಾಗಲೇ ಗುಂಡಿಯ ತುಂಬ ಕೊಳೆಯನೀರು ತುಂಬಿಕೊಂಡು ದುರ್ನಾತ ಬೀರುತ್ತಿದೆ ಮತ್ತು ಈ ಗುಂಡಿಯನ್ನು ರಸ್ತೆಯ ಮಧ್ಯದಲ್ಲೆ 6 ರಿಂದ 8 ಅಡಿ ತೆಗೆದಿದ್ದು ಓಡಾಡಲೂ ಸಾಷ್ಟು ತೊಂದರೆಯಾಗಿದ್ದು ವೃದ್ದರು ಮತ್ತು ಓಡಾಡು ಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಸ್ಥಳಿಯ ನಿವಾಸಿ ಗಾರೆಕೆಲಸ ಮಾಡುವ ಮಂಜುನಾಥ್ರವರು ಪತ್ರಿಕೆಗೆ ತಿಳಿಸಿದ್ದೇನೆಂದರೆ ಇಲ್ಲಿನ ಗುಂಡಿಯಲ್ಲಿ ಸಾಕಷ್ಟು ಕೊಳಚೆನೀರು ತುಂಬಿದ್ದು ಇಲ್ಲಿ ಕಟ್ಟಡವನ್ನು ನಿರ್ಮಿಸಲು ಈ ನೀರನ್ನು ಖಾಲಿಮಾಡಬೇಕು. ಅದಕ್ಕಾಗಿ ಇದನ್ನು ಬಿಟ್ಟು ನಮ್ಮ ವಾರ್ಡ್ನ ಎಲ್ಲಾಕಡೆ ಕಟ್ಟಡ ನಿರ್ಮಿಸಿದ್ದಾರೆ. ಇದರ ಬಗ್ಗೆ ನಾವು ನಗರಸಭೆಯ ಆಯುಕ್ತರಿಗೆ ತಿಳಿಸಿದೆವು. ಅವರು ಸಾಧ್ಯವಾದಷ್ಟು ಬೇಗ ಕಾಮಗಾರಿ ಮುಗಿಸುತ್ತೇವೆಂದು ಹೇಳಿದರೂ ಇದುವರೆಗೂ ಗುಂಡಿಯನ್ನು ಮುಚ್ಚಿಸಿಲ್ಲ. ಈ ಗುಂಡಿಗೆ ಯಾರದು ಬಿದ್ದು ಅಪಾಯವಾಗುವ ಮುನ್ನವೇ ಗುಂಡಿಯನ್ನು ಮುಚ್ಚಿಸಿ ನಮ್ಮಲ್ಲೆರ ಆರೋಗ್ಯವನ್ನು ಕಾಪಾಡಬೇಕೆಂದು ನಮ್ಮ ರಸ್ತೆಯವರೆಲ್ಲರ ಪರವಾಗಿ ಆಗ್ರಹಿಸುತ್ತಿದ್ದೇನೆಂದರು