ಹರ್ತಿಕೋಟೆ
ವೀರ ಯೋಧರನ್ನು ಹರ್ತಿಕೋಟೆ ಪ್ರೌಢಶಾಲೆಯಲ್ಲಿ ಗೌರವಿಸಲಾಯಿತು:- ಹಿರಿಯೂರು ತಾಲೂಕು ಹರ್ತಿಕೋಟೆ ಪಟೇಲ್ ತಿಪ್ಪಯ್ಯ ಕೆಂಚಮ್ಮ ಪ್ರೌಢಶಾಲಾ ಆವರಣದಲ್ಲಿ 72ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ತುಂಬಾ ಅದ್ದೂರಿಯಿಂದ ನೆರವೇರಿಸಲಾಯಿತು.
ಈ ಗ್ರಾಮ ಸುಮಾರು ಹನ್ನೆರಡು ಜನ ವೀರಯೋಧರನ್ನು ದೇಶದ ಸೇವೆಗಾಗಿ ನೀಡಿದೆ ಅದರಲ್ಲಿ ನಾಲ್ಕು ಜನ ನಿವೃತ್ತಿ ಹೊಂದಿದ್ದಾರೆ ಉಳಿದವರು ಇಂದಿಗೂ ಸೇವೆಯಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಓದಿದ ಯೋಧ ಸುರೇಶ್ ಅವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು ಪ್ರಸ್ತುತ ಇವರು ಜಮ್ಮು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ ಇವರ ಸೇವೆ ನಿಸ್ವಾರ್ಥವಾಗಿದ್ದು ಇತರರಿಗೆ ಮಾದಿರಯಾಗಿದೆ. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವರ್ಗದವುರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.