ಸಿಎಂರನ್ನು ಕುಟುಕಿದ ಚಂಪಾ…!!!

ಧಾರವಾಡ: 
       ನಗರದಲ್ಲಿ ನಡೆಯುತ್ತಿರುವ ಅಕ್ಷರ ಜಾತ್ರೆಯಲ್ಲಿ ಮಾತನಾಡಿದ ಚಂಪಾ ಅವರು ಸಿಎಂ ಅವರಿಗೆ ಸಣ್ಣದಾಗಿ ಕುಟುಕಿದ್ದಾರೆ ಇಂಗ್ಲಿಷ್ ಮಾಧ್ಯಮದ ವಿಚಾರವಾಗಿ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು ಸಿಎಂರನ್ನು ಕುಟುಕಿದ್ದಾರೆ ಎಂದು ತಿಳಿದುಬಂದಿದೆ.
      ನಮ್ಮ  ನೆಚ್ಚಿನ ಸಿಎಂ ಕುಮಾರ ಸ್ವಾಮಿಯವರು  ನಾಡಿನ ಪಾಲಿಗೆ  ಎಂದಿಗೂ ‘ಕುಟಾರಸ್ವಾಮಿ’ ಆಗಬಾರದು ಎಂದು ಚಂದ್ರಶೇಖರ್ ಪಾಟೀಲ್ ಅವರು ನಿನ್ನೆ ಕುಟುಕಿದರು.
      84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಚಂಪಾ ಅವರು, ಕನ್ನಡವೆಂಬುದು ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಒಂದು ಬೃಹತ್ ವೃಕ್ಷ. ನಮ್ಮ ಪ್ರೀತಿಯ ಮುಖ್ಯಮಂತ್ರಿಯವರಾದ ಕುಮಾರಸ್ವಾಮಿ ಅವರು ಕನ್ನಡ ವೃಕ್ಷದ ಪಾಲಿಗೆ  ಎಂದಿಗೂ ‘ಕುಟಾರಸ್ವಾಮಿ’ ಆಗಬಾರದು ಎಂದು ಹೇಳುವ ಮೂಲಕ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap