ಸಿಪಿಎಂ, ಸಿಪಿಐ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ತುಮಕೂರು:

      ತುಮಕೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮೂರು ವಾರ್ಡ್‍ಗಳಿಗೆ ಸಿಪಿಎಂ ಪಕ್ಷದ ಅಭ್ಯರ್ಥಿಗಳು ಪಾಲಿಕೆ ಕಚೇರಿಗೆ ತೆರಳಿ ಆಗಸ್ಟ್ 20ರಂದು ಮಧ್ಯಾಹ್ನ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

      ನಾಲ್ಕನೇ ವಾರ್ಡ್‍ನಿಂದ ರೇಖಾ ಬಿ.ಉಮೇಶ್, ಹನ್ನೆರಡನೇ ವಾರ್ಡ್‍ನಿಂದ ಹಿರಿಯ ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಮತ್ತು ಹನ್ನೊಂದನೇ ವಾರ್ಡ್‍ನಿಂದ ಶಂಕರಪ್ಪ ನಾಮಪತ್ರ ಸಲ್ಲಿಸಿದರು.

      ಸಿಪಿಐ ಪಕ್ಷದಿಂದ 2ನೇ ವಾರ್ಡ್‍ಗೆ ನಾಗೇಂದ್ರ ಕುಮಾರ್ ಮತ್ತು 17ನೇ ವಾರ್ಡ್‍ಗೆ ಮೊಹಮದ್ ಬೈಬಾನ್ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ 4ನೇ ವಾರ್ಡ್ ಅಭ್ಯರ್ಥಿ ಸೈಯದ್ ಮುಜೀಬ್, ನಮ್ಮ ಪಕ್ಷದ ವತಿಯಿಂದ ನಿರಂತರವಾಗಿ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ. ಹಿಂದೆಯೂ ತುಮಕೂರು ನಗರದಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಹಿಂದಿನಿಂದಲೂ ಜನರ ಜೊತೆಯಲ್ಲೇ ಕೆಲಸ ಮಾಡುತ್ತಿದ್ದೇವೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಹೀಗೆ ಜನಪರವಾಗಿ ಕೆಲಸ ಮಾಡಿದ್ದೇವೆ. ಜನತೆ ನಮ್ಮ ಹೋರಾಟವನ್ನು ಪರಿಗಣಿಸಿ ನಮಗೆ ಮತ ನೀಡಲಿದೆ ಎಂದು ಹೇಳಿದರು.

      ನಾವು ಬೇರೆ ಪಕ್ಷಗಳಂತೆ ಹಣ, ಹೆಂಡ ಮತ್ತು ಇತರೆ ವಸ್ತುಗಳನ್ನು ಮತದಾರರಿಗೆ ಹಂಚಿ ರಾಜಕೀಯ ಮಾಡುವುದಿಲ್ಲ. ಜನರಿಂದಲೇ ಒಂದು ಓಟು ಒಂದು ನೋಟು ಪಡೆದು ಚುನಾವಣಾ ರಾಜಕೀಯದಲ್ಲಿ ತೊಡಗಿದ್ದೇವೆ. ನಾವು ಗೆದ್ದರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಭ್ರಷ್ಟಾಚಾರ ರಹಿತವಾಗಿ ಪಾರದರ್ಶಕವಾಗಿ ಜನತೆಯ ಆಶಯಗಳಿಗೆ ತಕ್ಕಂತೆ ಮುನ್ನಡೆಯುತ್ತೇವೆ ಎಂದು ತಿಳಿಸಿದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap