ಸಿ.ಎಸ್.ಪುರದ ಎಸ್.ಬಿ.ಐ.ಶಾಖೆಗೆ ಬೆಂಕಿ..! ವಿಡಿಯೋ ನೋಡಿ

ತುಮಕೂರು: 

      ಗುಬ್ಬಿ ತಾಲ್ಲೂಕಿನ ಸಿ.ಎಸ್​.ಪುರದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಶಾಖೆಗೆ ಬೆಂಕಿ ಬಿದ್ದ ದುರ್ಘಟನೆ ಗುರುವಾರ ಬೆಳ್ಳಂಬೆಳಗ್ಗೆ ಸಂಭವಿಸಿದೆ.

       ಸಿ.ಎಸ್​.ಪುರದ ಎನ್​ಎಸ್​ಆರ್​ ಕಾಂಪ್ಲೆಕ್ಸ್​ನಲ್ಲಿರುವ ಎಸ್​ಬಿಐ ಶಾಖೆಯಲ್ಲಿ ಗುರುವಾರ ಮುಂಜಾನೆ 6 ಗಂಟೆಗೆ ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

      ಅವಘಡದಿಂದಾಗಿ ಕಟ್ಟಡವು ಶಿಥಿಲಗೊಂಡಿದ್ದು, ಒಳಗೆ ಇದ್ದ ಕಂಪ್ಯೂಟರ್, ಕುರ್ಚಿ, ಟೇಬಲ್ ಇತ್ಯಾದಿ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ.  ಸ್ಥಳಕ್ಕೆ ಭೇಟಿ ಕೊಟ್ಟಿರುವ ಪೊಲೀಸರು ಬೆಂಕಿಗೆ ಕಾರಣವೇನು ಎಂಬುದನ್ನು ಪರಿಶೀಲನೆ ನಡೆಸಿದ್ದಾರೆ.        

ರೈತರ ಆತಂಕ:

      ರೈತರು ಸಾಲ ಸೌಲಭ್ಯ ಪಡೆಯಲು ಇಟ್ಟಿದ್ದ ದಾಖಲೆಗಳು ನಾಶವಾಗಿದ್ದು, ಈ ಘಟನೆಯಿಂದಾಗಿ ಸಾಲ ಪಡೆದ ರೈತರು ಆತಂಕಕ್ಕೀಡಾಗಿದ್ದಾರೆ. 

ಅವಘಡಕ್ಕೆ ಕಾರಣ:

      ಬ್ಯಾಂಕ್ ಗೆ ರಕ್ಷಣೆಗೆ ಅವಶ್ಯಕತೆಯಿರುವ ಯಾವುದೇ ರೀತಿಯ ರಕ್ಷಣಾತ್ಮಕ ಕಾರ್ಯವನ್ನು ಮಾಡಿಕೊಳ್ಳದೇ ನಿರ್ಲಕ್ಷ್ಯ ತೋರಿದ್ದರಿಂದಲೇ ಈ ಅವಘಡ ಸಂಬಂಧಿಸಲು ಕಾರಣವಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. 

   

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap