ನವದೆಹಲಿ
ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಬೆನ್ನಲ್ಲೆ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಹೊಡೆತಾ ಬಿದ್ದಿದೆ.ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಆಶುತೋಷ್ ಅವರು ವೈಯಕ್ತಿಕ ಕಾರಣ ನೀಡಿ ಪಕ್ಷದಿಂದ ಹೊರನಡೆದಿದ್ದಾರೆ, ಪತ್ರಿಕೊದ್ಯಮದಲ್ಲಿದ ಆಶುತೋಷ್(53) ಅವರು ರಾಜಕೀಯಕ್ಕೆ ಪ್ರವೇಶ ಪಡೆದದ್ದು 2014ರ ಲೋಕಸಭೆ ಚುನಾವಣೆಯಲ್ಲಿ ಅವರು ಆರಿಸಿದ್ದು ಐತಿಹಾಸಿಕ ಚಾಂದಿನಿ ಚೌಕ್ . ನಂತರ ಎಎಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗುವ ಆಸೆ ಇಟ್ಟುಕೊಂಡಿದ್ದರು. ಆದರೆ, ಪಕ್ಷದಿಂದ ಸಂಜಯ್ ಸಿಂಗ್, ಎನ್ . ಡಿ ಗುಪ್ತಾ ಹಾಗ್ ಸುಶೀಲ್ ಗುಪ್ತಾ ಅವರು ನಾಮಾಂಕಿತರಾದರು ಇದರಿಂದ ಬೇಸರಗೊಂಡರೂ ಸುಮ್ಮನಿದ್ದ ಅವರು ಇಂದು ಪಕ್ಷದಿಂದ ಹೊರ ನಡೆದಿದ್ದಾರೆ.
ಹೊಗುವ ಮುನ್ನ ಅವರು ಪತ್ರಿಕಾ ಪ್ರತಿನಿಧಿಗಳಿಗೆ ಹೀಗೆ ತಮ್ಮ ಎ ಎ ಪಿ ಯೊಂದಿಗಿನ ತಮ್ಮ ಒಡನಾಟವನ್ನು ಹೇಳಿದು ಕೊಂಡರು “ ಪ್ರತಿಯೊಂದು ಪ್ರಯಾಣಕ್ಕೂ ಅಂತ್ಯವೊಂದಿದೆ. ಆಪ್ ಜೊತೆಗಿನ ನನ್ನ ಸುಂದರ/ಕ್ರಾಂತಿಕಾರಿ ಸಂಬಂಧವೂ ಕೊನೆಗೊಂಡಿದೆ. ನಾನು ವೈಯಕ್ತಿಕ ಕಾರಣಗಳಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷದ ಎಲ್ಲರಿಗೂ ನನ್ನ ಧನ್ಯವಾದಗಳು”.