ಹಂದಿ ಮಾಲೀಕರ ವಿರುದ್ಧ ದೂರು

 ದಾವಣಗೆರೆ:

      ಹಂದಿ ದಾಳಿಗೆ ತುತ್ತಾಗಿ ತೀವ್ರ ಗಾಯಗೊಂಡಿದ್ದ ಪಾಲಿಕೆಯ ವಾಲ್ವ್‍ಮೆನ್ ಮಂಜುನಾಥ್ 8 ಮಂದಿ ಹಂದಿ ಮಾಲೀಕರ ವಿರುದ್ಧ ಇಲ್ಲಿನ ಬಸವನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.

      ಹಂದಿಗಳ ಸಾಗಾಣಿಕೆ ಮಾಡಲು ಸರಿಯಾದ ವ್ಯವಸ್ಥೆ ಮಾಡಿಕೊಳ್ಳದೇ ನಿರ್ಲಕ್ಷದಿಂದ ಜಾಲಿ ನಗರದಲ್ಲಿ ಹಂದಿಗಳನ್ನು ಬಿಡಾಡಿಯಾಗಿ ಬಿಟ್ಟಿರುವ ಹಂದಿಗಳ ಮಾಲೀಕರಾದ ಪರಸಪ್ಪ, ಚಂದ್ರು, ಪರಮೇಶಿ, ಮಂಜಪ್ಪ, ಮಾರಪ್ಪ, ಅಣ್ಣೇಶ್, ಗಂಗಪ್ಪ, ಗಾಳೇಪ್ಪ ಇವರುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪಾಲಿಕೆಯ ವಾಲ್‍ಮೆನ್ ಮಂಜುನಾಥ ದೂರಿನಲ್ಲಿ ತಿಳಿಸಿದ್ದಾರೆ.

      ಸೆ.1ರಂದು ಜಾಲಿ ನಗರದಲ್ಲಿ ಮನೆಯ ಮುಂಭಾಗದಲ್ಲಿ ಕುಡಿಯುವ ನೀರಿನ ವಾಲ್ ತಿರುವಲು ಹೋಗಿದ್ದ ವೇಳೆ ಮರಿ ಹಾಕಿದ್ದ ಹಂದಿಯೊಂದು ಒಮ್ಮೆಲೆ ಕಾಲು, ತೊಡೆ ಹಾಗೂ ಮರ್ಮಾಂಗ ಕಚ್ಚಿ ತೀವ್ರ ಗಾಯಗೊಳಿಸಿತ್ತು. ಈ ವೇಳೆ ಸ್ಥಳೀಯರು ಬಂದು ಹಂದಿಯನ್ನು ಓಡಿಸಿ ನನಗೆ ಉಪಚರಿಸಿದರು ಎಂದು ವಾಲ್‍ಮೆನ್ ಮಂಜುನಾಥ್ ದೂರಿನಲ್ಲಿ ವಿವರಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap