ಹೊಸಪೇಟೆ-ಕೊಟ್ಟೂರು ರೈಲು ಸಂಚಾರ ಶೀಘ್ರವೇ ಆರಂಭಿಸಿ.

 ಹೊಸಪೇಟೆ :

      ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್ ರೈಲು ಸಂಚಾರವನ್ನು ಕೂಡಲೇ ಆರಂಭಿಸುವಂತೆ ಒತ್ತಾಯಿಸಿ ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿ ಪದಾಧಿಕಾರಿಗಳು ನೈರುತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.

      ಹೊಸಪೇಟೆ-ಕೊಟ್ಟೂರು ಪ್ರಯಾಣಿಕರ ರೈಲು ಸಂಚಾರ ಈಗಾಗಲೇ ವಿಳಂಬವಾಗಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸಿ, ರೈಲು ಸಂಚಾರ ಆರಂಭಿಸಬೇಕು. ಈ ಭಾಗದ ಬಹು ದಿನದ ಬೇಡಿಕೆಯಾದ ಹೊಸಪೇಟೆ-ಬೆಂಗಳೂರು ಹಗಲು ಹೊತ್ತು ಓಡಾಡುವ ಇಂಟರ್‍ಸಿಟಿ ಎಕ್ಸ್‍ಪ್ರೆಸ್‍ನ್ನು ಕೂಡಲೇ ಆರಂಭಿಸಬೇಕು. ಅನಂತಶಯನಗುಡಿ ರೈಲ್ವೇ ಗೇಟ್‍ನ ಸಂಖ್ಯೆ ಎಲ್.ಸಿ.-85ಗೆ ಮೇಲ್ಸೇತುವೆ ನಿರ್ಮಾಣ ಶೀಘ್ರವೇ ಆರಂಭಿಸುವಂತೆ ಮನವಿ ಸಲ್ಲಿಸಿದರು.

      ಮನವಿ ಸ್ವೀಕರಿಸಿದ ಎ.ಕೆ.ಗುಪ್ತಾ ಮಾತನಾಡಿ, ರೈಲ್ವೇ ಮಾರ್ಗದಲ್ಲಿ ಹಾದು ಹೋಗಿರುವ ಅಧಿಕ ಸಾಮಾಥ್ರ್ಯದ ವಿದ್ಯುತ್ ತಂತಿಗಳನ್ನು ಎತ್ತರಿಸುವ ಕಾಮಗಾರಿ ಆಗಷ್ಟ್‍ನಲ್ಲಿ ಪೂರ್ಣಗೊಳ್ಳಲಿದೆ. ವ್ಯಾಸನಕೇರಿ-ಕೊಟ್ಟೂರು ರೈಲು ಮಾರ್ಗದ ಮಧ್ಯೆ ಒಟ್ಟು 29 ರೈಲ್ವೇ ಗೇಟುಗಳಿವೆ. ಅದರಲ್ಲಿ 6 ಕಡಿಮೆ ಬಳಕೆಯ ರೈಲ್ವೇ ಕ್ರಾಸಿಂಗ್ ಗೇಟುಗಳನ್ನು ಬಂದ್ ಮಾಡಲಾಗುವುದು. ಉಳಿದ 19 ಗೇಟುಗಳನ್ನು ಹತ್ತಿರದಲ್ಲಿರುವ ಗೇಟುಗಳಿಂದ ಸಂಪರ್ಕ ಕಲ್ಪಿಸಿ, 4ಗೇಟುಗಳಿಗೆ ಅಂಡರ್ ಬ್ರಿಡ್ಜ್ ನಿರ್ಮಿಸಲಾಗುವುದು ಎಂದರು.

      ಈ ಸಂಧರ್ಭದಲ್ಲಿ ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿಯ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಕೆ.ಮಹೇಶ್, ಮುಖಂಡರಾದ ಎಂ.ಶಾಮಪ್ಪ, ಟಿ.ಆರ್.ತಿಪ್ಪೇಸ್ವಾಮಿ, ಅರವಿಂದ ಜಾಲಿ, ಕೌತಾಳ್ ವಿಶ್ವನಾಥ, ಹಾಗೂ ಶಿವಪುತ್ರಪ್ಪ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap