ನವದೆಹಲಿ:
ಪಾಕಿಸ್ತಾನವು ಮೊದಲು ಯುದ್ಧ ಆರಂಭಿಸುವುದಿಲ್ಲ, ಆದರೆ, ಭಾರತ ನಮ್ಮ ಮೇಲೆ ದಂಡೆತ್ತಿ ಬಂದರೆ ಉತ್ತರ ನೀಡದೇ ಇರುವುದಿಲ್ಲ,” ಎಂದು ಪಾಕ್ ಸೇನೆಯ ಐಎಸ್ಪಿಆರ್ನ ಮಹಾನಿರ್ದೇಶಕ ಮೇಜರ್ ಜನರಲ್ ಅಸಿಫ್ ಗಫೂರ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಇದೇ ವಿಚಾರ ಮುಂದಿಟ್ಟುಕೊಂಡು ಪಾಕಿಸ್ತಾನ ಮೇಲೆ ಸವಾರಿ ಮಾಡಲು ಬಂದರೆ ಸುಮ್ಮನೆ ಇರಲು ಸಾಧ್ಯವಿಲ್ಲ. ನೀವು ನಮ್ಮೊಂದಿಗೆ ಆಟವಾಡಬೇಡಿ ಎಂದು ಕಠಿಣ ಪದಗಳಲ್ಲಿ ಭಾರತಕ್ಕೆ ವಾರ್ನಿಂಗ್ ನೀಡಿದ್ದಾರೆ.
ಪಾಕಿಸ್ತಾನದ ಸೇನೆಗೆ ಸಾಕಷ್ಟು ಯುದ್ಧಗಳನ್ನು ಮಾಡಿದ ಅನುಭವ ಹೊಂದಿದೆ. ನಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ಬರುವಂಥ ಸ್ಥಿತಿ ಇದ್ದರೆ ಅದಕ್ಕೆ ಹೋರಾಡಲು ಸೇನೆ ಸಿದ್ಧವಿದೆ. ಯಾವುದೇ ದಾಳಿಗೂ ಪ್ರತ್ಯುತ್ತರ ಕೊಡಬಲ್ಲಷ್ಟು ಸಮರ್ಥವಾಗಿದೆ. ನಮಗೆ ಯುದ್ಧ ಪ್ರಾರಂಭಿಸುವ ಇಚ್ಛೆ ಇಲ್ಲ. ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ