ತುಮಕೂರು:
ನಗರದ ಮಾಜಿ ಕಾರ್ಪೊರೇಟರ್ ರವಿಕುಮಾರ @ ಗಡ್ಡರವಿ ರವರ ಕೂಲೆ ಪ್ರಕರಣದ ಆರೋಪಿ ಮಲ್ಲೇಶ @ ಮಧುಗಿರಿ ಮಲ್ಲೇಶ ಎಂಬುವನನ್ನು ಆಂಧ್ರದ ಬಸ್ ನಿಲ್ಲಾಣದಲ್ಲಿ ಬಂಧಿಸಿ, ಮಧುಗಿರಿ ಮಾರ್ಗವಾಗಿ ತುಮಕೂರಿಗೆ ಕರೆದುಕೂಂಡು ಬರುತ್ತಿದ್ದು, ಮಾರ್ಗಮಧ್ಯೆ ರಾತ್ರಿ ಸುಮಾರು 1:00 ಗಂಟೆ ಸಮಯದಲ್ಲಿ ಬೆಳದರ ಹೈವೇ ರಸ್ತೆಯ ಬಳಿ ಆರೋಪಿಯು ಬಹಿರ್ದಸೆಗೆ ಹೋಗಬೇಕು ಎಂದು ತಿಳಿಸಿದ್ದು,ಬಹಿರ್ದಸೆಗೆ ಕರೆತರುವಾಗ್ಗೆ ಏಕಾಏಕಿ ಕೈಗೆ ಹಾಕಿದ್ದ ಲೀಡಿಂಗ್ ಚೈನ್ ನಿಂದ ಬೆಂಗಾವಲಿಗಿದ್ದ ಮುಖ್ಯ ಪೇದೆ ಸೈಮನ್ ವಿಕ್ಟರ್ ರವರ ಕುತ್ತಿಗೆಗೆ ಬಲವಾಗಿ ಬಿಗಿದು,ತಳ್ಳಿ ತಪ್ಪಿಸಿಕೂಂಡು ಹೋಗಲು ಪ್ರಯತ್ನಿಸುತ್ತಿರವಾಗ, ಪತ್ತೆ ತಂಡದ ಅದಿಕಾರಿಗಳಾದ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ, ರಾಘವೇಂದ್ರ ಹಾಗೂ ಸಿಬ್ಬಂದಿ ಮೋಹನ್ ರವರುಗಳು ಆರೋಪಿಯ ಕಾಲುಗಳಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿಧಾರೆ .
ಗಾಯಗೊಂಡ ಆರೋಪಿ ಮಲ್ಲೇಶನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದು ಹಾಗೂ ಕುತ್ತಿಗೆಯ ನೋವಿನಿಂದ ಬಳಲುತ್ತಿದ್ದ ಮುಖ್ಯ ಪೇದೆ ಸೈಮನ್ ವಿಕ್ಟರ್ ರವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ .
ಈ ಪತ್ತೆಕಾರ್ಯದಲ್ಲಿ ಕ್ಯಾತಸಂದ್ರ ಇನ್ಸ್ಪೆಕ್ಟರ್ ರಾಮಕೃಷ್ಣ ಮತ್ತು ರಾಘವೇಂದ್ರ ಸಿಬ್ಬಂದಿಗಳಾದ ಮೋಹನ್, ಸೈಮನ್ ವಿಕ್ಟರ್ ಭಾಗವಹಿಸಿದ್ದರು.