ರಾಜ್ಯದೆಲ್ಲೆಡೆ ಮತದಾನಕ್ಕಾಗಿ ಪೊಲೀಸ್ ಸರ್ಪಗಾವಲು

ಬೆಂಗಳೂರು

      ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ನಡೆಯಲಿರುವ ಚುನಾವಣೆಯನ್ನು ಮುಕ್ತ ಮತ್ತು ಶಾಂತಿಯುತವಾಗಿ ನಡೆಸಲು ¸ಪೊಲೀಸ್ ಇಲಾಖೆಯು ಸರ್ವ ಸನ್ನಧ್ದವಾಗಿದ್ದು ಭದ್ರತೆಗಾಗಿಯೇ 90,997 ಸಿಬ್ಬಂದಿಯನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.

       ಎರಡು ಹಂತಗಳಲ್ಲಿ ನಡೆಯುವ ಚುನಾವಣೆಗೆ 58,225 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅದರಲ್ಲಿ 11,992 ಸೂಕ್ಷ್ಮ, 46,223 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ ಸೂಕ್ಷ್ಮ ಮತಗಟ್ಟೆಗಳಲ್ಲಿ ಇಬ್ಬರು ಮುಖ್ಯಪೇದೆ, ಗೃಹ ರಕ್ಷಕ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸಾಮಾನ್ಯ ಮತಗಟ್ಟೆಗಳಲ್ಲಿ ಮುಖ್ಯಪೇದೆ ಸೇರಿ ಪೆÇಲೀಸರನ್ನು ನಿಯೋಜಿಸಲಾಗಿದೆ ಎಂದು ರಾಜ್ಯಪೆÇಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

       ಮತದಾನದ ಬಗ್ಗೆ ನಿಗಾ ವಹಿಸಲು 3,313 ವಲಯ ಸಂಚಾರಿ ಗಸ್ತು ದಳಗಳನ್ನು 851 ವಲಯ ಮೇಲುಸ್ತುವಾರಿ ಗಸ್ತು ದಳವನ್ನು ರಚಿಸಲಾಗಿದೆ.ಮತದಾನದ ನಿಗಾ ವಹಿಸಲು 307 ಡಿಎಸ್‍ಪಿ ಸಂಚಾರಿ ಗಸ್ತುದಳ, 916 ಸಂಚಾರ ತಂಡಗಳು, 827 ಸ್ಥಿರ ಕಣ್ಗಾವಲು ತಂಡಗಳು, 10 ಭದ್ರತಾ ಕೊಠಡಿಗಳಿಗೆ ಕೇಂದ್ರೀಯ ಪಡೆಗಳ ಕಂಪನಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

       ಚುನಾವಣೆಗೆ 8282 ಪೆÇಲೀಸ್ ಉಪಾಧೀಕ್ಷಕರು, 851 ಪೆÇಲೀಸ್ ನಿರೀಕ್ಷಕರು, 1188 ಉಪನಿರೀಕ್ಷಕರು, 4205 ಸಹಾಯಕ ಪೆÇಲೀಸ್ ಉಪನಿರ್ದೇಶಕರು. 42,950 ಮುಖ್ಯ ಪೇದೆಗಳು, 40,117 ಗೃಹ ರಕ್ಷಕರು, 414 ಅರಣ್ಯ ವೀಕ್ಷಕರು, ರಕ್ಷಕರು, 990 ಜೈಲು ವಾರ್ಡರ್‍ಗಳೂ ಸೇರಿ 90,997 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

        ರಾಜ್ಯವು 8 ವರ್ಷಗಳಲ್ಲಿ ನಕ್ಸಲ್ ಚಟುವಟಿಕೆಯಿಂದ ಮುಕ್ತವಾಗಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ಘಟನೆಗಳು ನಡೆದಿಲ್ಲ. ಆದರೂ, ಕರ್ನಾಟಕದ ಮಲೆನಾಡು ಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸಂಪರ್ಕಿಸುವ ತ್ರಿಸಂಧಿ ಪ್ರದೇಶದಲ್ಲಿ ಕ್ಷೇತ್ರ ಪ್ರಾಬಲ್ಯ ಸಾಧಿಸುವ ಸಲುವಾಗಿ ಪ್ರತಿನಿತ್ಯ ಕಾರ್ಯಾಚರಣೆ, ರಾತ್ರಿ ವೇಳೆ ಗಸ್ತು ಹೆಚ್ಚಳ ಮಾಡಲಾಗಿದೆ. ಈ ಪ್ರದೇಶದಲ್ಲಿ ನಡೆಯುವ ಚುನಾವಣೆ ವೇಳೆ ಮತಗಟ್ಟೆಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಗಸ್ತು ತೀವ್ರಗೊಳಿಸಲಾಗಿದೆ ಎಂದರು.

ಶಸ್ತ್ರಾಸ್ತ್ರ ಠೇವಣಿ

       ಚುನಾವಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪರವಾನಗಿ ಪಡೆದ 98,055 ಶಸ್ತ್ರಾಸ್ತ್ರಗಳಲ್ಲಿ 95,422 ಶಸ್ತ್ರಗಳನ್ನು ಠೇವಣಿಯಾಗಿ ಪಡೆಯಲಾಗಿದೆ ಎಂದರು.

       ಅಪರಾಧ ಹಿನ್ನೆಲೆ ಹೊಂದಿರುವ ರೌಡಿಗಳು ಹಾಗೂ ದುಷ್ಕರ್ಮಿಗಳ ಮೇಲೆ ನಿಗಾವಹಿಸಲು ಹಾಗೂ ಮತದಾನದ ವೇಳೆ ಶಾಂತಿ ಕಾಪಾಡುವ ಸಲುವಾಗಿ ರಾಜ್ಯಾದ್ಯಂತ 47,427 ವ್ಯಕ್ತಿಗಳ ವಿರುದ್ಧ 44,844 ಮುಂಜಾಗ್ರತಾ ಪ್ರಕರಣಗಳನ್ನು ದಾಖಲಿಸಿ 12,621 ವ್ಯಕ್ತಿಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವವರಾಗಿದ್ದಾರೆ ಎಂದು ಗುರುತಿಸಲಾಗಿದೆ ಎಂದರು.

ಕೇಂದ್ರ ಪಡೆಗಳ ಪೆರೇಡ್

        ಚುನಾವಣೆಯ ಹಿನ್ನೆಲೆಯಲ್ಲಿ ಅಬಕಾರಿ ಕಾಯ್ದೆಯಡಿ 1594 ಪ್ರಕರಣಗಳನ್ನು ದಾಖಲಿಸಿ 11,220 ಲೀ. ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇದುವರೆಗೂ 15 ಕೋಟಿ 72 ಲಕ್ಷ 17 ಸಾವಿರದ 616 ರೂ.ನಗದು, 23,248 ಲೀ. ಮದ್ಯ, 3.12 ಕೆಜಿ ಚಿನ್ನ, 43.85 ಕೆಜಿ ಬೆಳ್ಳಿ ಅಲ್ಲದೆ 38 ಲಕ್ಷ ಮೌಲ್ಯದ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

        ಚುನಾವಣೆಗೆ 112 ಕೇಂದ್ರ ಪಡೆಗಳು ಆಗಮಿಸಲಿದ್ದು,ಅವುಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ ಕಳುಹಿಸಲಾಗುವುದು.ಈಗಾಗಲೇ ಆಗಮಿಸಿರುವ 10 ಪಡೆಗಳು ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿ ಶಾಂತಿಯುತ ಮತದಾನಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ ಎಂದು ಹೇಳಿದರು.


       ರಾಜ್ಯದ ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಹಾಗೂ ಕೊಡಗು ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶಗಳೆಂದು  ಗುರುತಿಸಿ ಅತಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಮಂಡ್ಯ ಕ್ಷೇತ್ರವನ್ನು ಅತಿ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ, 7 ಕೇಂದ್ರೀಯ ಪಡೆಗಳು, 9 ರಾಜ್ಯಮೀಸಲು ಪಡೆಯ ತುಕಡಿಗಳು, 38 ಜಿಲ್ಲಾ ಶಸ್ತ್ರಾಸ್ತ್ರ ದಳದ ತುಕಡಿಗಳನ್ನು ನಿಯೋಜಿಸಿ ಭದ್ರತೆ ಕೈಗೊಳ್ಳಲಾಗಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಪೊಲೀಸ್ ಭದ್ರತೆಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಹೆಚ್ಚುವರಿ ಪೆÇಲೀಸ್ ಮಹಾ ನಿರ್ದೇಶಕ ಕಮಲ್ ಪಂತ್ ಅವರು ತಿಳಿಸಿದರು.

         ಚುನಾವಣೆ ಸಂಬಂಧ ಒಂದು ಕಡೆ ಕಲ್ಲು ತೂರಾಟ ಸೇರಿ 18 ಗಲಾಟೆ ಪ್ರಕರಣಗಳು ದಾಖಲಾಗಿದ್ದು, ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.


   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap