ಹಾಸನ:
ಸಾಲ ಮರುಪಾವತಿಸುವಂತೆ ರೈತರಿಗೆ ಕಿರುಕುಳ ನೀಡಿದರೆ, ಬ್ಯಾಂಕ್ ಮ್ಯಾನೇಜರ್ ಅವರೇ ಕಾರಣ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ರಾಷ್ಟ್ರೀಕೃತ ಬ್ಯಾಂಕ್ಗಳ ವಿರುದ್ದ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಸಾಲ ಮರುಪಾವತಿಸುವಂತೆ ಕಿರುಕುಳ ನೀಡುವುದರಿಂದ ರೈತರು ನೊಂದು ಆತ್ಮಹತ್ಯೆ ಮಾಡಿಕೊಂಡಲ್ಲಿ ಅವರ ಸಾವಿಗೆ ಬ್ಯಾಂಕ್ ಕಾರಣವಾಗುತ್ತದೆ ಎಂದು ಹೇಳಿದ ಅವರು, ಒಂದು ವೇಳೆ ಬ್ಯಾಂಕ್ಗಳಿಗೆ ಹಣ ಹಾಕದಿದ್ದಲ್ಲಿ ಏನು ಮಾಡುತ್ತಾರೋ ಮಾಡಿಕೊಳ್ಳಲಿ ಅದಕ್ಕೇನೂ ಅಂಜಬೇಡಿ ಎಂದು ರೈತರಿಗೆ ಧೈರ್ಯ ತುಂಬಿದ್ದಾರೆ.