ಭಯೋತ್ಪಾದನೆ ನಿಲ್ಲಿಸಿ

ಭಯೋತ್ಪಾದನೆ ನಿಲ್ಲಿಸಿ
ಪೈಶಾಚಿಕ ಭಾವಕ್ಕೆ ಸಂಭ್ರಮ
ಪಟ್ಟು,ಮುಗ್ಧ ಮನಸುಗಳಿಗೆ ಹಿಂಸೆ
ಕೊಡುವ ರಾಕ್ಷಸ ಪ್ರವೃತ್ತಿ ಭಯೋತ್ಪಾದಕತೆಯನ್ನು
ದಯವಿಟ್ಟು ನಿಲ್ಲಿಸಿ.
ಪುಸ್ತಕ ಹಿಡಿವ ಕೈಗೆ ಬಂದೂಕು ಕೊಟ್ಟು
ಹೆತ್ತು-ಹೊತ್ತು ಸಾಕಿದ ತಾಯಿಯ
ಗರ್ಭದಲ್ಲಿ ಸಿಡಿಮದ್ದುಗಳ ಬಗಿದಿಟ್ಟು
ರಕ್ತದೋಕುಳಿ ಆಟ  ಆಡಿ ಸಾಧನೆ
ಗೈದವರಂತೆ ಕೇಕೆ ಹಾಕುವ ಮಂದಿಗೆ
ಸರಿ-ತಪ್ಪುಗಳ ತಿಳುವಳಿಕೆಯೆಲ್ಲುಂಟು ?
ಹೆತ್ತ ತಾಯಿಗೆ ನೆಚ್ಚಿನ ಮಗುವಾಗುವುದಿಲ್ಲ,
ನಂಬಿ ಕೈ ಹಿಡಿದ ಜೀವಕ್ಕೆ ಆಸರೆಯಾಗುವುದಿಲ್ಲ.
ತಮ್ಮ ತಮ್ಮ ಆತ್ಮ ಸಾಕ್ಷಿಗೆ ವಂಚನೆ ಮಾಡಿ,
ಹಲವು ಪ್ರಚೋದಕ ಸಂಘಟನೆಯ
ಮಾತಿಗೆ ಮರುಳಾಗಿ , ಕೋಪದ ಕೈಗೆ ಬುದ್ದಿ ಕೊಟ್ಟು ,ಅಮಾಯಕ ಜೀವ ತೆಗೆಯುವ ಮನೋವಿಕಲತೆಗೆ,
ಪಶ್ಚಾತ್ತಾಪ ಪದದ ಅರಿವು ಎಲ್ಲುಂಟು?

 

ದುಡಿದು ತಿನ್ನುವ ರೈತನಾಗಲಿಲ್ಲ,
ಪದವಿಗಳಿದ್ದರೂ ಸ್ವಾವಲಂಬಿಯಾಗಲಿಲ್ಲ,
ಇರುವುದು ,ಸಿಕ್ಕಿರುವುದು ,ಒಂದೇ ಬಾರಿ
ಮನುಷ್ಯ ಜನ್ಮ,ಹಲವು ಸಾಧಕರ
ಜೀವನ ಚರಿತ್ರೆಯ ಓದಿ ತಿಳಿ ಮಂಕುತಿಮ್ಮ.

 

ನೀ ಬದಲಾದೊಡೆ ನಡೆದಾಡುವ ದೇವರಾಗುತಿ,
ಇಲ್ಲದಿದ್ದರೆ ಅನಾಥ ಶವವಾಗಿ ಹಲವು ಪ್ರಾಣಿ ಪಕ್ಷಿಗೆ ಆಹಾರವಾಗುತಿ.
                           –       ಜೆ ರಘುನಾಥ್
                                 9844104862
                                 ಬೆಂಗಳೂರು

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap