ತುಮಕೂರು:
ಮಾಜಿ ಮೇಯರ್ ರವಿಕುಮಾರ್ ಆಲಿಯಾಸ್ ಗಡ್ಡ ರವಿ ಹತ್ಯೆ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ತುಮಕೂರು ಪೊಲೀಸರು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಬಳಸಿದ್ದ ಆಯುಧ ಮತ್ತು ವಾಹನಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ಈ ವರೆಗೆ ವಶಕ್ಕೆ ಪಡೆದ ಆರೋಪಿಗಳ ವಿವರ ಹೀಗಿದೆ..
ತುಮಕೂರಿನ ಹನುಮಂತಪುರದ ಸುಜಯ್ ಭಾರ್ಗವ್ (32)
ತುಮಕೂರಿನ ಬಿದಿರುಮೆಳೆ ತೋಟದ ರಘು (37)
ತುಮಕೂರು ತಾಲೂಕು ಕುಂದೂರಿನ ಕೆ.ಆರ್.ರಾಜೇಶ್ (30)
ತುಮಕೂರಿನ ದೇವರಾಯಪಟ್ಟಣದ ನವೀನ (37)
ಕೊರಟಗೆರೆಯ ಕೋಳಾಲದ ಕೆ.ಎಲ್.ದೇವರಾಜ (21)
ಬೆಂಗಳೂರಿನ ಬಸವೇಶ್ವರ ನಗರದ ರಘು (26)
ಬೆಂಗಳೂರಿನ ಲಗ್ಗೆರೆಯ ಜೋಮನ್ ವಿ. ಜಾರ್ಜ್ (27)
ಮದ್ದೂರಿನ ಬೆಸಗರಹಳ್ಳಿಯ ಬಿ.ಎಂ.ಜಗದೀಶ್ (26)
ಮದ್ದೂರಿನ ವಳಗೇರಹಳ್ಳಿಯ ವಿ.ಎನ್.ಮಹೇಶ್ (30)
ಕಾರ್ಪೋರೇಟರ್ ರವಿ ಹಂತಕರ ಸುಳಿವು..?
ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರನ್ನು ಪತ್ತೆ ಮಾಡುವ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ