ಹುಳಿಯಾರು
ಹುಳಿಯಾರಿನ ಸಾಕ್ಷ್ಯ ಕಣ್ಣು ಮತ್ತು ದಂತ ಆಸ್ಪತ್ರೆಯ ವತಿಯಿಂದ ಹಂದನಕೆರೆ ಹೋಬಳಿ ಮಲ್ಲಿಗೆರೆ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಸುಮಾರು 150 ಕ್ಕೂ ಹೆಚ್ಚು ಮಂದಿ ಭಾಗವಹಿಸುವ ಮೂಲಕ ಇದರ ಸದುಪಯೋಗ ಪಡಿಸಿಕೊಂಡರು. ಶಿಬಿರದಲ್ಲಿ ಕಣ್ಣು ಮತ್ತು ದಂತ ರಕ್ಷಣೆಯ ಬಗ್ಗೆ ಮಾಹಿತಿ ನೀಡಲಾಯಿತು. ಕಣ್ಣಿನ ಆರೋಗ್ಯಕ್ಕಾಗಿ ನಿತ್ಯ ಆಹಾರದಲ್ಲಿ ಸೊಪ್ಪು, ತರಕಾರಿ ಮತ್ತು ಹಣ್ಣು ಬಳಸಲು ಸಲಹೆ ನೀಡಲಾಯಿತು.
ಆಸ್ಪತ್ರೆ ಮುಖ್ಯಸ್ಥರಾದ ಲಕ್ಮೀ, ಪವನ್ ಕುಲಕರ್ಣಿ, ಗ್ರಾಪ ಸದಸ್ಯರುಗಳಾದ ಚಿದಾನಂದ್, ಗಂಗಾಧರ್, ಮಹಾದೇವಯ್ಯ, ಆಸ್ಪತ್ರೆ ಸಿಬ್ಬಂದಿವರ್ಗದವರಾದ ಮಧುಸೂದನ್, ನವೀನ್, ಇಮ್ರಾನ್, ನಿಶ್ಚಿತ, ರೂಪ, ಯಮುನ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ