ಬೆಂಗಳೂರು :
ಲೋಕಸಭಾ ಚುನಾವಣೆಗೆ ಮೇ-೧೯ ರಂದು ಕೊನೆಯ ಹಂತದ ಮತದಾನ ಪೂರ್ಣಗೊಂಡ ಬಳಿಕ ಸಂಜೆಯ ನಂತರವಷ್ಟೇ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಕುರಿತು ಎಲ್ಲಾ ಜಾಲತಾಣಗಳು ಹಾಗೂ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಇದರ ಹೊರತಾಗಿ ಪ್ರತಿಯೊಂದು ಹಂತದ ಚುನಾವಣೆಯ ಮತದಾನಕ್ಕೆ ೪೮ ಗಂಟೆ ಇರುವ ಮೊದಲೇ ಚುನಾವಣೆ ಸಂಬಂಧಿತ ತಮ್ಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ನೋಡಿಕೊಳ್ಳಬೇಕೆಂದು ಸಹ ಟೆಲಿವಿಷನ್, ರೆಡಿಯೋ ಚಾನಲ್ಗಳು, ಕೇಬಲ್ ನೆಟ್ವಕ್ಸ್, ಜಾಲತಾಣಗಳು ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಲಾಗಿದೆ.
ಈ ಅವಧಿಯಲ್ಲಿ ಯಾವುದೇ ರೀತಿಯ ಮತದಾನ ಅಭಿಪ್ರಾಯ, ಚರ್ಚೆ, ವಿಶ್ಲೇಷಣೆ, ದೃಶ್ಯಾವಳಿಗಳು ಅಥವಾ ಹೇಳಿಕೆಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ. ಚುನಾವಣೆ ಪ್ರಕ್ರಿಯೆ ಆರಂಭಗೊಂಡು ಮತ ಎಣಿಕೆ ಕಾರ್ಯ ಮುಗಿಯುವವರೆಗೆ ಪ್ರಸಾರ ಮಾಧ್ಯಮಗಳು ಪ್ರಕಟಿಸಿದ ಹಾಗೂ ಪ್ರಸಾರ ಮಾಡಿದ ಸುದ್ದಿಗಳ ಬಗ್ಗೆ ನಿಗಾ ಇರಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ