ಇಂದು ಹುಸೇನಿಯಾ ಫೌಂಡೇಷನ್ ಕಾರ್ಯಕ್ರಮ

ದಾವಣಗೆರೆ:

      ನಗರದ ಕೆ.ಆರ್.ರಸ್ತೆಯ ಗುಲ್‍ಷನ್ ಶಾದಿ ಮಹಲ್‍ನಲ್ಲಿ ಇಂದು (ಜ.4ರಂದು) ಮಧ್ಯಾಹ್ನ 3 ಗಂಟೆಗೆ ಕಕ್ಕರಗೊಳ್ಳದ ಹುಸೇನ್‍ಸಾಬ್ ಸ್ಮರಣಾರ್ಥ ಹುಸೇನಿಯಾ ಫೌಂಡೇಷನ್ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಒಂದು ದಿನದ ಕಾರ್ಯಾಗಾರ, ತರಬೇತಿ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಉಚಿತ ಉಲ್ಲನ್ ಹೊದಿಕೆ ವಿತರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್ ಅಧ್ಯಕ್ಷ ಕೆ.ಖಲಂದರ್ ಮಾತನಾಡಿ, ಸಮಾರಂಭದ ಸಾನಿಧ್ಯವನ್ನು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಕರ್ನಾಟಕ ಮುಸ್ಲಿಂ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಹೆಚ್.ಐ.ಅಬು ಸುಫಿಯಾನ್ ವಹಿಸುವರು.

        ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಹಿರಿಯ ಸಾಹಿತಿ ರಂಜಾನ್ ದರ್ಗಾ, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ತೋಳಹುಣಸೆ ಎಸ್‍ಪಿಎಸ್‍ಎಸ್ ವಸತಿಯುತ ಶಾಲೆ ನಿರ್ದೇಶಕ ಕೆ.ಇಮಾಂ ಅವರನ್ನು ಸನ್ಮಾನಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್ ಉಪಾಧ್ಯಕ್ಷ ಖಾದರ್ ಬಾಷಾ ರಜ್ವಿ, ಕಾರ್ಯದರ್ಶಿ ಕೆ.ಜಬೀವುಲ್ಲಾ, ಟ್ರಸ್ಟಿ ರಹಮತ್ ಉಲ್ಲಾ, ದಾದಾಪೀರ್, ಶಾಹೀದ್ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap