14ವರ್ಷದ ಜಾಗ್ವಾರ್ ಸಾವು

ಬೆಂಗಳೂರು

      ದೆಹಲಿಯಿಂದ ಮೈಸೂರಿನ ಮೃಗಾಲಯಕ್ಕೆ ತರಲಾಗಿದ್ದ 14ವರ್ಷದ ಜಾಗ್ವಾರ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಜಾಗ್ವಾರ್ ಇದ್ದ ಜಾಗಕ್ಕೆ ಬಂದಿದ್ದ ನಾಗರಹಾವನ್ನ ಜಾಗ್ವಾರ್ ಕಚ್ಚಿ ಸಾಯಿಸಿತ್ತು.

      ಈ ಸಮಯದಲ್ಲಿ ಜಾಗ್ವಾರ್‍ಗೆ ನಾಗರಹಾವು ಕಚ್ಚಿತ್ತು. ಜಾಗ್ವಾರ್‍ಗೆ ಮೃಗಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿತು ಎಂದು ಮೃಗಾಲಯದ ಸಿಇಓ ಅಜಿತ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ.

      ಈ ಮಧ್ಯೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಗಸನಹುಂಡಿ ಗ್ರಾಮದಲ್ಲಿ ಅರಣ್ಯ ಸಿಬ್ಬಂದಿ ಇರಿಸಿದ್ದ ಬೋನಿಗೆ ಮೂರು ವರ್ಷದ ಹುಲಿ ಬಿದ್ದಿದೆ. ಉಪಟಳ ಕೊಡುತ್ತಿದ್ದ ಹುಲಿ ಬೋನಿಗೆ ಬಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap