ಮ್ಯಾಜಿಸ್ಟ್ರೇಟ್ ಜೊತೆ ಅಸಭ್ಯವಾಗಿ ವರ್ತಿಸಿದ ಸೆಕ್ಯುರಿಟಿ ಗಾರ್ಡ್ ಮತ್ತು ಆಟೋ ಚಾಲಕನ ಬಂಧನ

ಬೆಂಗಳೂರು

        ಕೋರಮಂಗಲದ ಪೋರಂ ಮಾಲ್ ಬಳಿ ಸಿವಿಲ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ನಾಗರತ್ನ ಅವರ ಜೊತೆ ಅಸಭ್ಯವಾಗಿ ವರ್ತಿಸಿದ ಸೆಕ್ಯುರಿಟಿ ಗಾರ್ಡ್ ಹಾಗೂ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

        ಕೋರಮಂಗಲದ ಪೋರಂ ಮಾಲ್‍ನ ಸೆಕ್ಯೂರಿಟಿ ಗಾರ್ಡ್ ರಾಜ್‍ಶೆಟ್ಟಿ ಹಾಗೂ ಆಟೋ ಚಾಲಕ ವೆಂಕಟೇಶ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.56ನೇ ಡಿಸ್ಟ್ರಿಕ್ಟ್ ಸಿವಿಲ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಹೆಚ್.ಜಿ.ನಾಗರತ್ನ ಅವರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿದ ಕೋರಮಂಗಲ ಪೊಲೀಸರು ಅಸಭ್ಯವಾಗಿ ವರ್ತಿಸಿದ ಇವರಿಬ್ಬರನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ

        ಕೋರಮಂಗಲದ ಎನ್‍ಜಿಓನ ಅಪಾರ್ಟ್‍ಮೆಂಟ್‍ನಲ್ಲಿ ಹಲವು ವರ್ಷಗಳಿಂದ ವಾಸವಿರುವ ನಾಗರತ್ನ ಅವರು ಕಳೆದ ನ.29ರಂದು ಕೋರಮಂಗಲದ ಫೋರಂ ಮಾಲ್‍ಗೆ ಕುಟುಂಬ ಸಮೇತ ತೆರಳಿದ್ದರು ಶಾಪಿಂಗ್ ಮುಗಿಸಿಕೊಂಡು ರಾತ್ರಿ ಮನೆಗೆ ಹಿಂತಿರುಗುವಾಗ ಮಾಲ್ ಬಳಿ ಕಾರಿನಲ್ಲಿ ಅಂಗವಿಕಲರೊಬ್ಬರನ್ನು ನಾಗರತ್ನ ಅವರು ಹತ್ತಿಸಿಕೊಳ್ಳಲು ಸ್ವಲ್ಪ ತಡವಾಗಿತ್ತು.
ಕೂಡಲೇ ಅಲ್ಲಿಗೆ ಬಂದ ಸೆಕ್ಯೂರಿಟಿ ಗಾರ್ಡ್ ರಾಜ್‍ಶೆಟ್ಟಿ ಕೂಡಲೇ ಕಾರು ತೆಗೆಯುವಂತೆ ಹೊರ ಹೋಗಿ ಹತ್ತಿಸಿಕೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾನೆ ತಾವು ಜಡ್ಜ್ ಅಂಗವಿಕಲರು ಹತ್ತುವುದು ತಡವಾಗಿದೆ ಎಂದರೂ ಬಿಡದೆ ಜೋರು ಮಾಡಿದ್ದು ಶೆಟ್ಟಿಗೆ ಬೆಂಬಲವಾಗಿ ಬಂದ ಆಟೋ ಚಾಲಕ ವೆಂಕಟೇಶ್ ಕೂಡ ಅಸಭ್ಯವಾಗಿ ವರ್ತಿಸಿದ್ದಾನೆ

          ಈ ಸಂಬಂಧ ನಾಗರತ್ನ ಅವರು ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇನ್ಸ್‍ಪೆಕ್ಟರ್ ಮಂಜುನಾಥ್ ಅವರು ಆರೋಪಿಗಳನ್ನು ಬಂಧಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap