ನಿಯಂತ್ರಣ ತಪ್ಪಿ ಬೈಕ್ ಸವಾರ ಸಾವು ..!!!

ಬೆಂಗಳೂರು

         ವೇಗವಾಗಿ ಬೈಕ್‍ನಲ್ಲಿ ಹೋಗುತ್ತಿದ್ದ ಕೇರಳ ಮೂಲದ ಮೆಡಿಕಲ್ ವಿದ್ಯಾರ್ಥಿ ಯೊಬ್ಬರು ನಿಯಂತ್ರಣ ತಪ್ಪಿ ಕೆಳಗೆಬಿದ್ದು ಮೃತಪಟ್ಟಿರುವ ಘಟನೆ ಬನಶಂಕರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

         ಮೃತಪಟ್ಟ ವಿದ್ಯಾರ್ಥಿಯನ್ನು ಅಬ್ರಾಹಂ ಫಿಲಿಪ್ಸ್ ಸಜಿ(23) ಎಂದು ಗುರುತಿಸಲಾಗಿದೆ.ಹೊಸಕೆರೆಹಳ್ಳಿಯ ಕಾಲೇಜೊಂದರಲ್ಲಿ ಫಿಜಿಯೋಥೆರಪಿ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ಅಬ್ರಾಹಂ ಕಾಲೇಜು ಹಾಸ್ಟೆಲ್‍ನಲ್ಲೇ ತಂಗುತ್ತಿದ್ದರು.ರಾತ್ರಿ ಅಂಗಡಿಗೆ ತೆರಗಳಿದ್ದ ಅಬ್ರಾಹಂ ಸಾಮಾನು ಖರೀದಿಸಿ ಬೈಕ್‍ನಲ್ಲಿ 8.20ರ ಸುಮಾರಿನಲ್ಲಿ ಹಾಸ್ಟೆಲ್‍ಗೆ ಹಿಂದಿರುತ್ತಿದ್ದರು.

         ಬನಶಂಕರಿ 3ನೇ ಹಂತ, ದತ್ತಾತ್ರೇಯ ನಗರ ಶನಿಮಹಾತ್ಮ ದೇವಸ್ಥಾನದ ರಸ್ತೆಯಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಅಬ್ರಾಹಂ ಬೈಕ್ ನಿಂದ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap