ಉಡುಪಿ
ಮಗನೇ ಎಲ್ಲಿದ್ದೀಯಪ್ಪ? ಎಂಬ ಡೈಲಾಗ್ ಹೇಳಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಯಕ್ಷಗಾನದ ಹಾಸ್ಯ ಕಲಾವಿದನ ವಿರುದ್ಧ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.
ಯಕ್ಷಗಾನ ಪ್ರಸಂಗವೊಂದರಲ್ಲಿ ಮಗನೇ ಎಲ್ಲಿದ್ದೀಯಪ್ಪ? ಎಂದು ಡೈಲಾಗ್ ಹೇಳಿದ್ದ ವೀಡಿಯೋ ತುಣುಕು ಟ್ರೋಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕುಮಾರಸ್ವಾಮಿ ಅವರ ಡೈಲಾಗ್ ಅನ್ನು ಯಕ್ಷಗಾನದಲ್ಲಿ ಹಾಸ್ಯಕ್ಕೆ ಬಳಸಿದ ಕಲಾವಿದನ ಮೇಲೆ ಈಗ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ .
ಕರ್ನಾಟಕ ಕಾರ್ಮಿಕರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ರವಿ ಶೆಟ್ಟಿ ಬೈಂದೂರು ಮತ್ತು ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಬೈಂದೂರು ಠಾಣೆಯಲ್ಲಿ ಕಲೆಗೆ ಮತ್ತು ಕಲಾವಿದರನ್ನು ಮತ್ತು ಯಕ್ಷ ಪ್ರಿಯರನ್ನು ಅವಮಾನಿಸಿ ಮತ್ತು ಅಸಂಬದ್ಧ ಮಾತನ್ನು ಆಡಿದ್ದಾರೆ ಎಂಬ ಆರೋಪದಡಿ ಯಕ್ಷಗಾನ ಕಲಾವಿದನ ಮೇಲೆ ದೂರು ದಾಖಲಿಸಿದ್ದಾರೆ.