ಮುಖ್ಯ ಎಂಜಿನಿಯರ್‍ಗಳ ವರ್ಗಾವಣೆ

ಬೆಂಗಳೂರು:

       ರಾಜ್ಯ ಸರ್ಕಾರದ ಸೇವೆಯಲ್ಲಿರುವ ಮುಖ್ಯ ಎಂಜಿನಿಯರ್‍ಗಳ ವರ್ಗಾವರ್ಗಿ ನಡೆದಿದ್ದು, 10ಕ್ಕೂ ಹೆಚ್ಚು ಮುಖ್ಯ ಇಂಜಿನಿಯರ್‍ಗಳು ಹಾಗೂ ಒಬ್ಬ ಅಧೀಕ್ಷಕ ಎಂಜಿನಿಯರ್ ರವರನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ.ವರ್ಗಾವಣೆಯಾಗಿರುವ ಮುಖ್ಯ ಎಂಜಿನಿಯರ್‍ಗಳು ಮತ್ತು ಅವರು ನಿಯುಕ್ತಿಗೊಂಡಿರುವ ಸ್ಥಳದ ವಿವರ ಈ ರೀತಿ ಇದೆ.

       ಕೆ. ಬಾಲಕೃಷ್ಣ, ಮುಖ್ಯ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಬಿಜಾಪುರ. ಜಿ.ಟಿ. ಸುರೇಶ್, ಮುಖ್ಯ ಅಭಿಯಂತರರು, ಸ್ಮಾರ್ಟ್‍ಸಿಟಿ ಲಿಮಿಟೆಡ್, ಬೆಂಗಳೂರು. ಪ್ರಭಾಕರ ಡಿ. ಹಮಿಗಿ, ನಿರ್ದೇಶಕರು ( ಮುಖ್ಯ ಅಭಿಯಂತರರು ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯ ಸಣ್ಣ ನೀರಾವರಿ ಇಲಾಖೆ ಬೆಂಗಳೂರು.) ಹೋಳಿಯಾಚಿ ಪರಸಪ್ಪ ಬಸಪ್ಪ, ಆಡಳಿತ ಅಧಿಕಾರಿ, ಕಾಡಾ, ಭೀಮರಾಯನಗುಡಿ ಎಂ. ನಾರಾಯಣ, ಮುಖ್ಯ ಅಭಿಯಂತರರು, ಸ್ಮಾರ್ಟ್‍ಸಿಟಿ ಲಿ. ಹುಬ್ಬಳ್ಳಿ-ಧಾರವಾಡ
ಮಸೂದ್ ಷರೀಫ್ , ಮುಖ್ಯ ಅಭಿಯಂತರರು, ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿ. ಅನಿಲ್‍ಕುಮಾರ್, ಮುಖ್ಯ ಅಭಿಯಂತರರು, ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೋರೇಷನ್ ಲಿ.ಆರ್.ಪಿ. ಕುಲಕರ್ಣಿ, ಮುಖ್ಯ ಎಂಜಿನಿಯರ್, ಕರ್ನಾಟಕ ನೀರಾವರಿ ನಿಗಮ, ಗುಲ್ಬರ್ಗಾ ಬಿ. ಶಿವಶಂಕರ್, ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು. ಲಕ್ಷ್ಮಣರಾವ್ ಪೇಶ್‍ವೇ, ಮುಖ್ಯ ಎಂಜಿನಿಯರ್ ನೀರಾವರಿ (ಉತ್ತರವಲಯ ಬೆಳಗಾವಿ). ಜಿ.ಎಸ್. ಗೋಪಿನಾಥ್, ಅಧೀಕ್ಷಕ ಅಭಿಯಂತರರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap