ಲಾರಿ ಹರಿದು ಬಾಲಕ ಸಾವು

ಬೆಂಗಳೂರು

          ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಕಂಟೇನರ್ ಲಾರಿ ಹರಿದು ಸ್ಥಳದಲ್ಲೇ ಓರ್ವ ಬಾಲಕ ಸಾವನ್ನಪ್ಪಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು 10ಕ್ಕೂ ಹೆಚ್ಚು ಮಂದಿ ಪಾರಾಗಿರುವ ದಾರುಣ ಘಟನೆ ನೆಲಮಂಗಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನಲ್ಲಿ ನಡೆದಿದೆ.

         ಮಹಾರಾಷ್ಟ್ರ ಮೂಲದ ಜೋತು ಚೌಹಾಣ್(14)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಗಾಯಗೊಂಡಿರುವ ಮಾಲಾ(45) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

           ಆಟಿಕೆಗಳು,ಪಾತ್ರೆ ಸಾಮಾನುಗಳು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಜೋತು ಚೌಹಾಣ್, ಮಾಲಾ ಸೇರಿ 10-15 ಮಂದಿ ಮಹಾರಾಷ್ಟ್ರಕ್ಕೆ ಭಾನುವಾರ ರಾತ್ರಿ ಹೊರಟಿದ್ದು ಬಸ್ ಸಿಗದೇ ಇದ್ದರಿಂದ ನೆಲಮಂಗಲದ ಜಾಸ್ ಟೋಲ್ ಬಳಿಯ ಫುಟ್‍ಪಾತ್ ಮೇಲೆ ಮಲಗಿದ್ದರು.

          ಮುಂಜಾನೆ 3ರ ವೇಳೆ ವೇಗವಾಗಿ ಬಂದ ಕಂಟೇನರ್ ಲಾರಿ ಹರಿದು ಸ್ಥಳದಲ್ಲೇ ಜೋತು ಚೌಹಾಣ್ ಮೃತಪಟ್ಟರೆ ಮಾಲಾ ಗಂಭೀರವಾಗಿ ಗಾಯಗೊಂಡರು ಉಳಿದಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ನೆಲಮಂಗಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap