ಕಾಂಗ್ರೇಸ್ ವಿಜಯೋಜಯೋತ್ಸವ

ಹೊಳಲ್ಕೆರೆ:

         ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ರಾಜಸ್ಥಾನ, ಛತ್ತೀಸ್‍ಘಡ, ಮಧ್ಯ ಪ್ರದೇಶ ಈ ಮೂರು ರಾಜ್ಯಗಳಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿಜಯ ಪತಾಕೆಯನ್ನು ಹಾರಿಸುವುದರ ಮುಖಾಂತರ ಭಾರತ ದೇಶದ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿರುವ ಹಿನ್ನಲೆಯಲ್ಲಿ ಪಟ್ಟಣದ ಮುಖ್ಯ ವೃತ್ತದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮತ್ತು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.

         ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಧು ಪಾಲೇಗೌಡ ಮಾತನಾಡಿ ಭಾರತ ದೇಶದಲ್ಲಿ ಈಗ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಆಡಳಿತ ವಿರೋಧಿ ಅಲೆ ಬುಗಿಲೆದ್ದಿದ್ದು ಅವರ ಈ ದೇಶದ ಬಡ ಜನತೆಗೆ ಕೊಟ್ಟಂತಹ ಆಶ್ವಾಸನೆಗಳಾದ ಪ್ರತಿಯೊಬ್ಬ ಬಡವರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿ ಸುಳ್ಳು ಭರವಸೆ ನೀಡಿದ್ದಾರೆ. ಈ ದೇಶದ ನಿರುದ್ಯೋಗಿ ಯುವಕರಿಗೆ 1 ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದು ಹೇಳಿ ಸುಳ್ಳು ಭರವಸೆ ನೀಡಿದ ವಿರುಧ್ದ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ದೂರಿದ್ದರು.

ಈ ಸಂದರ್ಭದಲ್ಲಿ  ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ. ಅಧ್ಯಕ್ಷ ಟಿ.ರಮೇಶ್ , ಉಪಧ್ಯಕ್ಷ ಕರಿಯಪ್ಪ ಎಸ್., ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ. ಕಿರಣ್ ಯಾದವ್, ಶಶಿಕಿರಣ್ ಬಾಲು, ಸೈಯದ್ ಖುದ್ದೂಸ್ , ವಿಕಾಸ್ , ಶಶಾಂಕ್, ರಂಗಸ್ವಾಮಿ, ರವಿಕುಮಾರ್, ತಿಮ್ಮಣ್ಣ, ಮದನ್, ಕೆ.ಟಿ.ಸಂತೋಷ್ ಸಂಗನಗುಂಡಿ ಮಂಜಣ್ಣ ,ಅಶೋಕ್,ಸಜಿಲ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾವರಣೆಯಲ್ಲಿ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap