ಮಧುಗಿರಿ
ಕ್ಷುಲ್ಲಕ್ಕ ಕಾರಣಕ್ಕೆ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕುಟುಂಬವನ್ನು ಗುಂಪೊಂದು ಏಕಾಏಕಿ ಥಳಿಸಿ ರಕ್ತ ಗಾಯಗೊಳಿಸಿರುವ ಘಟನೆ ಭಾನುವಾರ ಸಂಜೆ ನಡೆದಿದೆ
ತಾಲ್ಲೂಕಿನ ಐಡಿಹಳ್ಳಿ ಹೋಬಳಿಯ ಹಳೆ ಇಟಕಲೋಟಿ ಗ್ರಾಮದ ಮಂಜುನಾಥ್ ಮತ್ತು ತಾಯಿ ಹನುಮಕ್ಕನ ಮೇಲೆ ಇಟ್ಟಿಗೆಯಿಂದ ಮೂವರು ಹಲ್ಲೆ ನಡೆಸಿದ್ದು, ಮಂಜುನಾಥ್ ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀವಿಬ್ಬರು ಗ್ರಾಮವನ್ನು ಬಿಡದೆ ಹೊದರೆ ನಿಮ್ಮ ಮೇಲೆ ವಾಮಾಚಾರ ಮಾಡುವುದಾಗಿ ನಾರಾಯಣಪ್ಪ, ಸತೀಶ್, ಕಲಾವತಿ ಎನ್ನುವವರು ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಗಾಯಾಳು ಮಂಜುನಾಥ್ ಆರೋಪಿಸಿದ್ದಾರೆ ಈ ಬಗ್ಗೆ ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.