ಧಾರವಾಡ:
ಬ್ಯಾಂಕಿಗೆ ಬ್ಯಾಗ್ ಹಿಡಿದು ಬರುವುಉ ಸಾಮಾನ್ಯ ಆದರೆ ರೈತನೊಬ್ಬ ಕತ್ತಿ ಹಿಡಿದುಕೊಂಡು ಬಂದ ಕಾರಣ ಅಲ್ಲಿದ್ದ ಗ್ರಾಹಕರು ಕೆಲ ಕಾಲ ಆತಂಕಗೊಂಡ ಪರಿಸ್ಥಿತಿ ಧಾರವಾಡ ಜಿಲ್ಲೆಯ ಅಮಿನ್ ಬಾವಿ ಗ್ರಾಮದ ಯುಕೊ ಬ್ಯಾಂಕಿನಲ್ಲಿ ಕಳೆದ ನಡೆದಿದೆ.
ರೈತನನ್ನು ಬಸಪ್ಪ ಜಿ ಮುಂದಿನ್ಮಾನಿ ಎಂದು ಗುರುತಿಸಲಾಗಿದೆ. ಕ್ಯಾಶಿಯರ್ ಗೆ ಕ್ತತಿ ತೋರಿಸಿ ಆತನ ಬಳಿ ಇದ್ದ ಹಣ ಬೇಕೆಂದು ಬಸಪ್ಪ ಬೆದರಿಕೆ ಹಾಕಿದ್ದಾರೆ.
ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಸಪ್ಪ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು ಸ್ವಲ್ಪ ಸಾಲ ಕಟ್ಟದೆ ಬಾಕಿ ಉಳಿಸಿಕೊಂಡಿದ್ದ. ಯಾರೊ ಬಸಪ್ಪನ ಖಾತೆಗೆ ಹಣ ವರ್ಗಾಯಿಸಿದ್ದರು. ತಾನು ಪಡೆದ ಸಾಲಕ್ಕೆ ಬ್ಯಾಂಕಿನವರು ಹಣ ಕಟ್ಟುತ್ತಾರೆ ಎಂದು ಭಾವಿಸಿ ಕ್ಯಾಶಿಯರ್ ಬಳಿ ಹಣ ಕೇಳಿದ್ದಾನೆ.
ಕ್ಯಾಶಿಯರ್ ಬಳಿ ಬಂದು ನನ್ನ ಸಾಲದ ಮೊತ್ತ ನೀವು ಭರಿಸಬೇಕು ಎಂದು ಕತ್ತಿ ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.