ಬೆಂಗಳೂರು:
ಟ್ರಿನಿಟಿ ಮೆಟ್ರೋ ಸ್ಟೇಷನ್ನ ಪಿಲ್ಲರ್ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಹಗಲು-ರಾತ್ರಿ ಎನ್ನದೇ ಕಾರ್ಯಾಚರಣೆ ನಡೆಯುತ್ತಿದೆ. ಮೆಟ್ರೋ ಮಾರ್ಗದಲ್ಲಿರುವ ಎಲ್ಲಾ ಪಿಲ್ಲರ್ ಹಾಗೂ ಬೀಮ್ಗಳ ಪರಿಶೀಲನೆಗೆ ಸೂಚನೆ ನೀಡಲಾಗಿದೆ.
ಇದರ ಬೆನ್ನಲ್ಲೇ ದೆಹಲಿ ಮೆಟ್ರೋ ತಜ್ಞರಿಂದ ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ಸೂಚನೆ ಬಂದಿದೆ. ಅಲ್ಲದೆ ಮೆಟ್ರೋ ಪಿಲ್ಲರ್ ಹಾಗೂ ಬೀಮ್ಗಳ ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಾಕೀತು ಮಾಡಿದ್ದಾರೆ.ಇನ್ನು ದೆಹಲಿ ಮೆಟ್ರೋ ತಜ್ಞರಿಂದ ಇಂದು ಬಿಎಂಆರ್ಸಿಎಲ್ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಯಲಿದೆ.
ಪ್ರತಿ ವರ್ಷ ಪಿಲ್ಲರ್ ಬೀಮ್,ಟ್ರ್ಯಾಕ್ ಪರಿಶೀಲನೆ ಮಾಡಬೇಕು.ಆದರೆ ಮೆಟ್ರೋ ಸಿಬ್ಬಂದಿ ಆರಂಭದಿಂದ ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ.
ಮಳೆ ನೀರು ಸರಾಗವಾಗಿ ಹರಿದು ಹೋಗದೇ ಇರುವುದರಿಂದ ಪಿಲ್ಲರ್ನ ಕಬ್ಬಿಣದ ಸರಕುಗಳಿಗೆ ತುಕ್ಕು ಹಿಡಿದಿದೆ.ಹೀಗಾಗಿ ಪಿಲ್ಲರ್ನಲ್ಲಿ ಬಿರುಕು ಉಂಟಾಗಿದೆ ಎಂದು ಹೇಳಲಾಗುತ್ತಿದೆ.ಆದರೆ ಮೆಟ್ರೋ ಅಧಿಕಾರಿಗಳಿಗೆ ಬಿರುಕಿನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ