ಬಳ್ಳಾರಿ
ಕೇಂದ್ರಕಾರಾಗೃಹದಲ್ಲಿ ಇಂದು ಮಹಿಳಾ ಖೈದಿಗಳೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆಯನ್ನು ಮಾಡಿದರು.ಅಲಂ ಸುಮಂಗಳ ಮಾತನಾಡಿ ಜೈಲ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಬೇಕೆಂದು ಅವರೊಂದಿಗೆ ಚೆನ್ನಾಗಿ ಇರಬೇಕೆಂದರು.
ಮಹಿಳಾ ಖೈದಿಗಳು ಯಾವುದೇ ಕಾರಣಕ್ಕೂ ಮಾನಸಿಕವಾಗಿ ಕುಗ್ಗದೇ, ಧೈರ್ಯದಿಂದ ಇರಬೇಕೆಂದರು. ಆಲೋಚನೆಗಳು ಉತ್ರಮವಾಗಿರಲಿ ಎಂದರು.20 ಜನ ಮಹಿಳಾ ಖ್ಯೆದಿಗಳಿಗೆ ಈ ಮಹಿಳಾ ಸಂಸ್ಥೆ ಯಿಂದ ಸಿರೇ ಮತ್ತು ಇನ್ನಿತರ ಹೊಸ ಬಟ್ಟೆಗಳನ್ನು ವಿತರಣೆ ಮಾಡಿದರು.ನಂತರ ಖೈದಿಗಳಿಗೆ ಜಿಲೇಬಿ, ಬಿಸಿಬೆಲೆಬಾತ್ ಆಹಾರವನ್ನು ಬಡಿಸಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಅಲಂ ಸುಮಂಗಳ, ಕಾರ್ಯದರ್ಶಿ ರಾಮದೇವಿ, ಉಪಾಧ್ಯಕ್ಷೆ ಸಾಧನಹೀರೇಮಠ್, ರಂಜಿನಿ ನಟರಾಜ್, ಮಾಜಿ ಅಧ್ಯಕ್ಷೆ ವಿಪಿ ಮಾಯಾ ರಾವ್, ಶೈಲ, ಅಲಂರಚನಾ, ಮಧುಕೇಶ್ವರಿ, ಸ್ವರ್ಣಲತ, ಜಯಶ್ರೀ ಇನ್ನಿತರ ಸದಸ್ಯರು ಹಾಜರಿದ್ದರು.ಈ ಕಾರ್ಯಕ್ರಮದಲ್ಲಿ ಜೈಲ್ ಸಹಾಯಕ ಅಧೀಕ್ಷಕ ಶರಣಬಸಪ್ಪ, ಸಾವಿತ್ರಿಮ್ಮ, ಭೀಮಶಂಕರ್ ಜಮಾದಾರ್ ಹಾಜರಿದ್ದರು.