ಕಣ್ಣೂರು ಮೂಲದ ಎಂಬಿಎ ವಿದ್ಯಾರ್ಥಿ ಸಾವು

ಬೆಂಗಳೂರು

          ಕೇರಳದ ಕಣ್ಣೂರು ಮೂಲದ ಎಂಬಿಎ ವಿದ್ಯಾರ್ಥಿಯೋರ್ವ ರಾಜಾನುಕುಂಟೆ ಬಳಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

          ಮಾರಸಂದ್ರದ ಪ್ರಾವಿಡೆಂಟ್ ವೆಲ್‍ವರ್ಥ್ ಸಿಟಿಯಲ್ಲಿ ಫ್ಲ್ಯಾಟ್ ಬಾಡಿಗೆಗೆ ತೆಗೆದುಕೊಂಡು ವಾಸಿಸುತ್ತಿದ್ದ ಮೃತ ವಿದ್ಯಾರ್ಥಿಯನ್ನು ಅರ್ಜುನ್ ಪ್ರಭಾಕರ್(21) ಎಂದು ಗುರುತಿಸಲಾಗಿದೆ. ಬೆಂಗಳೂರಿಗೆ ಬಂದು ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಅರ್ಜುನ್ ಜೊತೆಗೆ ಐವರು ಸ್ನೇಹಿತರ ಜೊತೆ ವಾಸವಿದ್ದರುಅರ್ಜುನ್‍ನ ಸಹಪಾಠಿಗಳು ಕೂಡಾ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

         ಶುಕ್ರವಾರ ರಾತ್ರಿ 12 ಗಂಟೆ ಸುಮಾರಿಗೆ ಹೆಗ್ಗನಹಳ್ಳಿಯಲ್ಲಿರುವ ಸ್ನೇಹಿತನ ಮನೆಗೆ ಬುಲೆಟ್ ಬೈಕ್‍ನಲ್ಲಿ ಹೋಗುತ್ತಿದ್ದಾಗ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಹೊನ್ನೇನಹಳ್ಳಿ ಬಳಿ ಅಪಘಾತದಲ್ಲಿ ಅರ್ಜುನ್ ಮೃತಪಟ್ಟಿದ್ದಾನೆ ಎಂದು ರಾಜಾನುಕುಂಟೆ ಪೆÇಲೀಸರು ತಿಳಿಸಿದ್ದಾರೆ.

        ಆದರೆ, ಮೃತನ ಕುತ್ತಿಗೆ, ತಲೆ ಮತ್ತು ಮುಖಕ್ಕೆ ಹಲ್ಲೆ ಮಾಡಿದಂತಹ ಗಾಯಗಳಾಗಿವೆ. ಅಲ್ಲದೇ, ಕೈ, ಕಾಲು ಮತ್ತು ದೇಹದ ವಿವಿಧೆಡೆಯಲ್ಲೂ ಗಾಯಗಳಾಗಿದ್ದು, ಜೊತೆಯಲ್ಲಿ ವಾಸವಿದ್ದ ಸ್ನೇಹಿತರು ಅರ್ಜುನ್ ಸಾವಿಗೆ ಬೇರೆ ಏನಾದರೂ ಕಾರಣ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರಾದರೂ ಇಲ್ಲಿಯವರೆಗಿನ ತನಿಖೆಯಲ್ಲಿ ಬೈಕ್ ಅಪಘಾತದಲ್ಲಿ ಸಾವು ಸಂಭವಿಸಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ

          ಮೃತ ಯುವಕನ ತಂದೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಕಣ್ಣೂರಿನಲ್ಲಿ ನೆಲೆಸಿದ್ದಾರೆ. ಪಾಲಕರಿಗೆ ಒಬ್ಬನೇ ಮಗನಾಗಿದ್ದಾನೆ ಎಂದು ಆತನ ಸ್ನೇಹಿತ ವೈಶಾಖ್ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap