ಸಿಎಂ ಎಚ್.ಡಿ.ಕುಮಾರ ಸ್ವಾಮಿಯ ಹುಟ್ಟು ಹಬ್ಬ ಆಚರಣೆ

ಕೊರಟಗೆರೆ

        ಹಗಲಿರುಳು ರೈತ ಹಾಗೂ ಜನಸಾಮಾನ್ಯರ ಜಪಮಾಡುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಭಗವಂತ ಆಯಸ್ಸು, ಆರೋಗ್ಯಭಾಗ್ಯ ನೀಡಿ ಕಾಪಾಡಲಿ ಎಂದು ಮಾಜಿ ಶಾಸಕ ಪಿ.ಆರ್. ಸುಧಾಕರ ಲಾಲ್ ಪ್ರಾರ್ಥಿಸಿದರು.

        ಅವರು ಪ.ಪಂ ಆವರಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯ 59 ನೇ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ಕೇಕ್ ಕತ್ತರಿಸಿ, ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು, ಹಣ್ಣು ವಿತರಿಸಿ ಮಾತನಾಡುತ್ತಾ, ರೈತಪರ ಮನ ಮಿನಿಡಿಯುವಂತಹ ಕುಮಾರಸ್ವಾಮಿಗಳಿಗೆ ಇನ್ನಷ್ಟು ಆಯಸ್ಸು ನೀಡಲಿ ಎಂದು ದೇವರಲ್ಲಿ ಮನವಿ ಮಾಡಿದರು.

         ರೈತನ ಮಗನಾಗಿ ಹುಟ್ಟಿ ಸದಾ ರೈತರ ಪರವಾಗಿ ಯೋಚನೆ ಮಾಡುವ ನಮ್ಮ ಹೆಮ್ಮೆಯ ಜನನಾಯಕ ಕುಮಾರಣ್ಣ. ರಾಜ್ಯದ ರೈತರ ಮತ್ತು ಬಡವರ ಸೇವೆ ಮಾಡುವುದು ಕುಮಾರಣ್ಣನ ಮೂಲ ಉದ್ದೇಶವಾಗಿದೆ. ರಾಜ್ಯದ ಕೋಟ್ಯಂತರ ಕಾರ್ಯಕರ್ತರು ಮತ್ತು ಅಭಿಮಾನಿ ದೇವರ ಆಶೀರ್ವಾದ ಸದಾ ಕುಮಾರಣ್ಣನ ಮೇಲಿದೆ ಎಂದು ಹೇಳಿದರು.

        ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು ಮಾತನಾಡಿ, ಸದಾ ರಾಜ್ಯದ ರೈತರ ಹಿತ ಕಾಪಾಡುವ ರೈತ ನಾಯಕ ಕುಮಾರಣ್ಣನ ಆರೋಗ್ಯವನ್ನು ದೇವರು ಕರುಣಿಸಲಿ ಎಂದು ಕೊರಟಗೆರೆ ಕ್ಷೇತ್ರದ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಪರವಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

         ಕೊರಟಗೆರೆ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಯುವ ಕಾರ್ಯಕರ್ತರಿಂದ ಕುಮಾರಸ್ವಾಮಿಯ 59ನೇ ಹುಟ್ಟು ಹಬ್ಬದ ಪ್ರಯುಕ್ತ 59 ಕೆಜಿ ತೂಕದ ಬೃಹದಾಕಾರದ ಕೇಕ್ ಕತ್ತರಿಸಲಾಯಿತು. ನಂತರ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಒಳ ಮತ್ತು ಹೊರರೋಗಿಗಳಿಗೆ ಹಾಲು, ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡಲಾಯಿತು.

          ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಪ್ರೇಮಾ, ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಂಗಮುತ್ತಪ್ಪ, ಪಪಂ ಸದಸ್ಯರಾದ ರಮೇಶ್, ಕಲೀಂವುಲ್ಲ, ಸಿದ್ದಮಲ್ಲಪ್ಪ, ಪುಟ್ಟನರಸಪ್ಪ, ನಾರಾಯಣ್, ಗಣೇಶ್, ಮಾಜಿ ಸದಸ್ಯ ಆನಂದ್, ಯುವ ಜನತಾದಳ ನಗರಾಧ್ಯಕ್ಷ ಫಾರೂಕ್ ಸೇರಿದಂತೆ ಇತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap