ಮಂಜಪ್ಪ ಅವರು ಹರೆಕೆಯ ಕುರಿಯಲ್ಲಾ, ಅವರು ಕೊಬ್ಬಿದ ಟಗರು:ಹುಲಿಗೇಶ್

ಹರಿಹರ:

    ಕೆ.ಎಸ್. ಈಶ್ವರಪ್ಪ ಅವರು ನೀಡುತ್ತಿರು ಹೇಳಿಕೆಯಲ್ಲಿ ಭಾಷೆ ಹಿಡಿತವಿಲ್ಲ. ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಶಾಮ್ ಸನ್ ಮೇಸ್ತ್ರಿ ಆಕ್ರೋಶ ವ್ಯಕ್ತಪಡಿಸಿದರು.

     ನಗರದ ರಚನಾ ಕ್ರೀಡಾಟ್ರಸ್ಟ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು, ವರಿಷ್ಠರನ್ನು ಮೆಚ್ಚಿಸಿ, ಉನ್ನತ ಸ್ಥಾನ ಗಿಟ್ಟಿಸಿಕೊಳ್ಳಲು ಕೆ.ಎಸ್. ಈಶ್ವರಪ್ಪ ಅವರು ಈ ರೀತಿಯ ಹೇಳಿಕೆಯನ್ನು ನೀಡುತ್ತಿರುವುದು ಅವರ ಗೌರವಕ್ಕೆ ಧಕ್ಕೆ ತರುತ್ತಿದೆ. ಅವರು ರಾಜಕೀಯದಲ್ಲಿ ಬೆಳೆಯಬೇಕಾದವರು, ಅವರ ಈರಿತೀಯ ಮಾತಗಳನ್ನಾಡುವ ವೇಳೆ ಎಚ್ಚರಕೆಯಿಂದ ಇರಬೇಕು ಎಂದರು.

       ಕಾಂಗ್ರೆಸ್ ಯುವ ಘಟಕದ ಮಾಜಿ ಅಧ್ಯಕ್ಷ ಸಿ.ಎನ್ ಹುಲಿಗೇಶ್ ಮಾತನಾಡಿ, ಜಿಲ್ಲೆಯ ಮೈತ್ರಿ ಪಕ್ಷದ ಅಭ್ಯರ್ಥಿ ಮಂಜಪ್ಪ ಅವರು ಹರೆಕೆಯ ಕುರಿ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತ್ ರಾವ್ ಜಾದವ್ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ, ಮಂಜಪ್ಪ ಅವರು ಹರೆಕೆಯ ಕುರಿಯಲ್ಲಾ, ಅವರು ಕೊಬ್ಬಿದ ಟಗರು. ಬಿಜೆಪಿ ಪಕ್ಷದವರು ಮತ್ತೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಎಂದು ಹೇಳಿದರು.

      ಈ ಬಾರಿಯ ಲೋಕಸಭಾ ಚುನಾವಣೆಗೆ ಜಿಲ್ಲೆಯ ಎಲ್ಲಾ ತಾಲೂಕಿನ ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸಿರುವುದು ನಮಗೆ ಆನೆಯ ಬಲ ಸಿಕ್ಕಂತಾಗಿದೆ. ಈ ಬಾರಿ ಮೈತ್ರಿ ಪಕ್ಷದ ನಮ್ಮ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂದು ಹೇಳಿದರು.
ಗೋಷ್ಠಿಯಲ್ಲಿ ರಮೇಶ್, ಅಬ್ದುಲ್, ರೆಹಮತ್ ಉಲ್ಲಾ ಹಾಗೂ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap