ಬೆಂಗಳೂರು
ವಾಂತಿ ಮಾಡುವ ನೆಪ ಮಾಡಿದ ದುಷ್ಕರ್ಮಿಯೊಬ್ಬ ಪಕ್ಕದ ಸೀಟಿನಲ್ಲಿದ್ದ ವಕೀಲರೊಬ್ಬರಿಂದ ಹಣ ಕದ್ದು ಪರಾರಿಯಾದ ಘಟನೆ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೋಪಾಲನ್ ಮಾಲ್ ಬಳಿಯಿಂದ ಹೊರಟಿದ್ದ ಬಿಎಂಟಿಸಿ ಬಸ್ನಲ್ಲಿ ಪಕ್ಕದಲ್ಲಿ ಕೂತಿದ್ದ ವ್ಯಕ್ತಿ ವಾಂತಿ ಬರುವಂತೆ ನಟಿಸಿ ವಕೀಲ ಶಾಂತಪ್ಪ ಎಂಬುವವರ ಬಳಿ ಕಿಟಕಿ ಪಕ್ಕ ಸೀಟ್ ಬಿಟ್ಟು ಕೊಡುವಂತೆ ಕೇಳಿದ್ದಾರೆ. ತಕ್ಷಣ ವಕೀಲ ಶಾಂತಪ್ಪ ಸೀಟು ಬಿಟ್ಟುಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯ ಸಹಚರರು ಶಂತಪ್ಪರ ಬಳಿಯಿದ್ದ ಒಂದೂವರೆ ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿದ್ದಾರೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ