ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿ ಉದ್ಘಾಟನೆ

ಮೊಳಕಾಲ್ಮುರು

          ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ , ಶಾಸಕಾಂಗ , ಕಾರ್ಯಾಂಗದೊದಿಗೆ ಪ್ರತಿಕಾಂಗ ಒಂದಾಗಿದ್ದು , ಪತ್ರಕರ್ತರ ಸೇವೆ ಅಮೂಲ್ಯವಾದ ಸೇವೆಯಾಗಿದೆ ಎಂದು ಸಂಸದ ಬಿ.ಎನ್.ಚಂದ್ರಪ್ಪ ತಿಳಿಸಿದರು.

       ಪಟ್ಟಣದ ಸಾಮಥ್ರ್ಯ ಸೌಧದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಪತ್ರಕರ್ತರ ಸೇವೆ ಮಹತ್ವಪೂರ್ಣ ಸೇವೆಯಾಗಿದ್ದು , ಸರ್ಕಾರದ ಕಾರ್ಯ ಯೋಜನೆಗಳು ಮತ್ತು ಜನಪ್ರತಿನಿಧಿಗಳ ಕಾರ್ಯ ಸಾಧನೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಮಹತ್ವಪೂರ್ಣವಾದ ಸೇವೆಯಾಗಿದೆ ಎಂದು ಹೇಳಿದರು.

       ಸಾರ್ವಜನಿಕ ಕ್ಷೇತ್ರದ ಸೇವೆ ಸಲ್ಲಿಸುವ ಪರ್ತಕರ್ತರ ಭವನಕ್ಕಾಗಿ ಈಗಾಗಲೇ 5 ಲಕ್ಷ ರೂಗಳ ಅನುದಾನ ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿದೆ. ಕಾಮಗಾರಿ ಮುಂದುವರೆದಂತೆ ಮತ್ತೊಮ್ಮೆ 5 ಲಕ್ಷಗಳ ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದರು.
ಶಾಸಕ ಶ್ರೀರಾಮುಲು ಮಾತನಾಡಿ ಪತ್ರಕರ್ತರ ಸೇವೆಗೆ ಅನುವಾಗುವಂತಹ ಪ್ರತಿಕಾ ಭವನ ನಿರ್ಮಾಣಕ್ಕಾಗಿ ಸಂಸದರ ಅನುದಾನದ ಜೊತೆಯಾಗಿ ಶಾಸಕರ ಅನುದಾನದಡಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

         ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಮುಂಡ್ರಿಗಿ ನಾಗಹರಾಜ್ , ಡಾ.ಬಿ.ಯೋಗೇಶ್ ಬಾಬು , ಯುವ ಕಾಂಗ್ರೆಸ್ ಉಪಾಧ್ಯಕ್ಷ ಜಗದೀಶ್ , ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ರೇಷ್ಮೆ ವೀರೇಶ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಕಟ್ಟೆ , ಹಿರಿಯ ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಯಪ್ರಕಾಶ್ , ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆಂಚಪ್ಪ , ಪ್ರಧಾನ ಕಾರ್ಯದರ್ಶಿ ಬಿ.ಟಿ.ನಾಗಭೂಷಣ್ , ಗೌರವಾಧ್ಯಕ್ಷ ಪಾತಯ್ಯ , ಉಪಾಧ್ಯಕ್ಷ ಈರಣ್ಣ , , ಖಜಾಂಚಿ ಗೋವಿಂದಪ್ಪ , ಜಿ.ಬಿ.ಮಲ್ಲಿಕಾರ್ಜುನ , ತಿರುಮಲೇಶ , ಗೊಲ್ಲಾಳಪ್ಪ , ಉಮೇಶ್ , ಅಜ್ಜಪ್ಪ , ಜಯಣ್ಣ , ರಾಮಚಂದ್ರ , ಬಸವರಾಜ , ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap