ದಾವಣಗೆರೆ :
ತಾಲೂಕಿನ ತುರ್ಚಘಟ್ಟ ಗೋಮಾಳ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಶಾಸಕ ಎಸ್.ಎ. ರವೀಂದ್ರನಾಥ್ ಭೇಟಿ ನೀಡಿ ನಿರಾಶ್ರಿತರ ಯೋಗಕ್ಷೇಮ ವಿಚಾರಿಸಿದರು.
ನಂತರ ನಿರಾಶ್ರಿತರ ಕೊಠಡಿಗಳು, ಅಡುಗೆ ಮನೆ ಹಾಗೂ ಸುತ್ತಮುತ್ತಲಿನ ಸ್ವಚ್ಛತೆಯನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ ಎಂ. ಕಂಬಾರ, ಗಂಗಾಧರ ಶಾಸ್ತ್ರೀ, ಶಿರಮಗೊಂಡನಹಳ್ಳಿ ಗ್ರಾ.ಪಂ. ಕಾರ್ಯದರ್ಶಿ ಎಂ.ಎಂ. ಮಲ್ಲೇಶ್, ಗ್ರಾ.ಪಂ. ಸದಸ್ಯ ಪ್ರಭುದೇವ್, ಬಿಜೆಪಿ ಮುಖಂಡ ಮುಕುಂದಪ್ಪ, ಎಸ್.ಎಸ್. ಷಣ್ಮುಖಪ್ಪ, ಟಿ.ಎಸ್. ರವಿಕುಮಾರ್, ಮಂಜುನಾಥ್, ಪ್ರಭಾರ ಅಧೀಕ್ಷಕಿ ನಳಿನಿ, ದ್ವಿತೀಯ ದರ್ಜೆ ಸಹಾಯಕ ಬಾಲಕೃಷ್ಣ ನಾಯ್ಕ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ತುರ್ಚಘಟ್ಟ ಗ್ರಾಮಸ್ಥರು ಹಾಜರಿದ್ದರು.